| "What to expect from Openstack Training by Hastexo Academy in Bangalore ? : A Feedback on the Openstack Training in February 2014 in Bangalore. [All ratings are provided for the scale of TEN] | ||
|---|---|---|
| Session | Feedback | Remarks |
| Introduction to Openstack: 2 Days | ||
| Materials | SEVEN | Well Organized. |
| Lab Sessions | SIX | Well Organized. |
| Presentation/Delivery | SIX | The presenter Knows what he is talking. |
| Coverage | FIVE | Well Covered, though some nuisances of Installation should have been covered. |
| Overall Rating | SIX | |
| Weakness | The attendees should have been informed of the necessary pre-requisites like Libvirt, AMQP, Python Libs, etc. | |
| Openstack Networking: 2 Days | ||
| Materials | FIVE | Poor Organization and misleading sentences |
| Lab Sessions | FOUR | Very poor. Just a basic scenario, that too within a single compute node: which is poor! |
| Presentations/Delivery | THREEE | The presenter lacks Basic Knowledge in Networking itself, forget about SDN. |
| Coverage | FOUR | Various scenarious should have been covered, at least in theory. |
| Overall Rating | FOUR | |
| Weakness | Almost Everything! | |
| Cerificates | NIL | Not even a participation cerificate will be provided. Though they claim they will provide a participation ceriticate, they will not respond to mails after the training. |
| Reuse of Materials | BAD | The images provided are not extensible. |
| Summary | "1. If you do not have proper background - it will be very difficult. 2. Registering for Networking Session is a waste - unless you have good background in SDN." | |
Monday, April 21, 2014
Review of Openstack Training by Hastexo Academy in Bangalore [ FEBRUARY 2014]
Wednesday, October 3, 2012
Tuesday, October 2, 2012
Wednesday, October 26, 2011
ಹವ್ಯಕರ ಬದುಕು ಮತ್ತು ವಿವಾಹ - ಮನೋರಮಾ ಎಮ್. ಭಟ್
ಕಾಸರಗೋಡು ಸಹಿತವಾದ ಅಂದಿನ ದಕ್ಷಿಣ ಕನ್ನಡಲ್ಲಿರುವ ಬ್ರಾಹ್ಮಣರ ಒಂದು ವರ್ಗವನ್ನು ಹವ್ಯಕರೆಂದು ಕರೆಯುತ್ತಿದ್ದಾರೆ. ಹವ್ಯಕ ಬ್ರಾಹ್ಮಣರು ಉತ್ತರ ಕನ್ನಡಲ್ಲಿಯೂ ಇದ್ದಾರೆ. ಈ ಎರಡು ಹವ್ಯಕರ ಬದುಕು ಮತ್ತು ಕುಟುಂಬ ಜೀವನದಲ್ಲಿ ಅಲ್ಪ ಸ್ವಲ್ಪ ಭಿನ್ನತೆಯೂ ಇದೆ. ಅಂದರೆ ನಾವು ಮನೆಯಲ್ಲಿ ಆಡುವ ಭಾಷೆ, ನಮ್ಮ ಹೆಸರಿನ ಜೊತೆಗೆ ಇರುವ ಅಡ್ಡ ಹೆಸರು, ಜೀವನ ಕ್ರಮ, ಆರಾಧಿಸುವ ರೀತಿ ನೀತಿಗಳಲ್ಲಿ ವ್ಯತ್ಯಾಸವಿದೆ.
ದಕ್ಷಿಣ ಕನ್ನಡದ ಹವ್ಯಕರು ಸ್ಮಾರ್ಥರು, ಶಿವನ ಆರಾಧಕರು. ನಮ್ಮ ಕುಟುಂಬಕ್ಕೆ ಒಂದು ಗೋತ್ರವಿರುತ್ತದೆ- ವಶಿಸ್ಟ, ವಿಶ್ವಾಮಿತ್ರ, ಭಾರದ್ವಾಜ ಮುಂತಾದ ಋಷಿ ಮುನಿಗಳ ಹೆಸರುಗಳು ನಮ್ಮ ಗೋತ್ರವಾಗಿರುವುದು ಯಾಕೆ? ಬಹುಷಃ ನಮ್ಮ ಕುಟುಂಬದ ಮೂಲ ಪುರುಷರು ಅವರಾಗಿರಬಹುದೇ? ಅಥವಾ ನಮ್ಮ ಹಿರಿಯರು ಅವರ ಶಿಷ್ಯರಾಗಿರಬಹುದೇ? ಇನ್ನು ಒಂದು ಸಂಶಯ ನನ್ನ ಮನದಲ್ಲಿ ಬರುತ್ತದೆ. ಏಕೆ ಆ ಮುನಿ ಪುಂಗವರು ಒಬ್ಬ ಅನಾಥ ಗಂಡು ಮಗುವನ್ನು ದತ್ತ ಪುತ್ರನಾಗಿ ಸ್ವೀಕರಿಸಿರಬಾರದು. ಅವನ ಪೀಳಿಗೆಯವರನ್ನು ಆ ದತ್ತ ಪಿತನ ಹೆಸರಿನಿಂದಲೇ ಕರೆಯುತ್ತಿರಬಹುದೇ?
ಹವ್ಯಕರಲ್ಲಿ ಸಗೋತ್ರ ವಿವಾಹಗಳು ನಡೆಯಲು ಸ್ವಾಮಿಗಳ ಒಪ್ಪಿಗೆ ಇಲ್ಲ. ಆದರೂ ಪ್ರಾಯಶ್ಚಿತ್ತವಿಲ್ಲದ ತಪ್ಪುಗಳೂ ಇಲ್ಲವಲ್ಲ! ಈ ಸಗೋತ್ರ ಮದುವೆಯು ಕಾನೂನು (ಹವ್ಯಕರ) ರೀತಿಯಲ್ಲಿ ಒಪ್ಪಿಗೆಯಾಗ ಬೇಕಾದರೆ- ವಧುವಿನ ಹೆತ್ತವರು ತಮ್ಮ ವಿವಾಹಯೋಗ್ಯಳಾದ ಕನ್ಯೆಯನ್ನು ಬೇರೆಯ ಗೋತ್ರದವರಿಗೆ ದಾನ ನೀಡಿ - ಅವರಿಂದ ತಮ್ಮ ಮಗಳ ಕನ್ಯಾದಾನವನ್ನು ಮಾಡಿಸಿದ್ದೂ ಇದೆ. ಆದರೂ ಸೋದರಿಕೆಯ (ಅಣ್ಣನ ಮಗಳು + ಅಕ್ಕನ ಮಗ) ಸಂಬಂಧಗಳಿಗಿಂತ ಸಗೋತ್ರ ವಿವಾಹ ಖಂಡಿತ ಒಳ್ಳೆಯದೇ ಎಂದು ಬುದ್ಧಿವಂತ ಎಳೆಯರು ಹೇಳುತ್ತಿದ್ದಾರೆ.
ನಮ್ಮ ವಿವಾಹಕ್ಕೆ ಬಳಸುವ ಮಂತ್ರಗಳ ರೀತಿಗಳಿಗೆ ಸೂತ್ರಗಳಿವೆ (ಸೂತ್ರ ಅಂದರೆ ಸ್ಟೆಪ್ಸ್- ರೀತಿ, ದಾರಿ, ಇತ್ಯಾದಿ)- ಅಶ್ವಲಾಯನ ಮತ್ತು ಬೋಧಾಯನ ಸೂತ್ರಗಳು. ನಾವು ಬೋಧಾಯನ ಸೂತ್ರದಲ್ಲೇ ವಿವಾಹ ವಿಧಿಗಳನ್ನು ನೆರವೇರಿಸುತ್ತೇವೆ.
ಅಶ್ವಲಾಯನ ಮತ್ತು ಬೋಧಯನರು ವೈದಿಕ ವಿದ್ವಾಂಸರು. ನಮ್ಮ ವಿವಾಹಗಳು ನಡೆಸಲ್ಪಡುವಾಗ ನಮ್ಮ ವೈದಿಕರು ಬಳಸುವ ಮಂತ್ರಗಳನ್ನು ನಾವು (ಜನ ಸಾಮಾನ್ಯರು ಮತ್ತು ಚಿಂತನ ಶೀಲರು) ಕಿವಿಗೊಟ್ಟು ಆಲಿಸಬೇಕು. ನೀವೇ ಯೋಚಿಸಿ ಗೋತ್ರ, ಪ್ರವರ, ಆಸ್ತಿಯ ಹಕ್ಕು ಇತ್ಯಾದಿಗಳು ನಮ್ಮ ಜೀವನದಲ್ಲಿ ಪುರುಷನಿಂದಲೇ ಮುಂದಿನ ಪೀಳಿಗೆಗೆ ಹೋಗುತ್ತದೆಯಲ್ಲ. ಕನ್ಯಾದಾನವನ್ನು ಮಾಡಿದ ನಂತರ ನಿಮ್ಮ ಮಗಳು ತನ್ನ ಪತಿಯ ಗೋತ್ರ, ಕುಟುಂಬದ ಏಕ ವ್ಯಕ್ತಿಯಾಗಿ ಪತಿಗ್ರಹಕ್ಕೆ ಕಾಲಿಡುತ್ತಾಳೆ. ತಾನೇ ಕನ್ಯದಾನವನ್ನು ಕೊಟ್ಟ ನಂತರ ಅದನ್ನು ಪುನಃ ಆಕೆಯ ಹೆತ್ತವರಿಗೆ ಕಿತ್ತುಕೊಳ್ಳುವ ಅವಕಾಶ ಇದೆಯೇ- ಇಲ್ಲ, ಇಲ್ಲ ಖಂಡಿತವಾಗಿ ಇಲ್ಲ.
ಆದರೆ ವಿವಾಹದ ಮಂಟಪದಲ್ಲಿ ಹತ್ತು ಸಮಸ್ತರ ಎದುರಿನಲ್ಲಿ ಪ್ರತಿಜ್ಞಾ ಬದ್ಧನಾಗಿ ವರ ವಧುವಿನ ಕತ್ತಿಗೆ ಮಂಗಲ ಸೂತ್ರವನ್ನು ಕಟ್ಟುತ್ತಾ ಹೀಗೆ ಹೇಳುತ್ತಾನೆ "ಮಾಂಗಲ್ಯಂತಂತು ನಾನೇನ ಮಮ ಜೀವನ ಹೇತುನ, ಕಂಠೇ ಬದ್ನಾಮಿ ಸುಭಗೇ ತ್ವಂ ಜೀವ ಶರದಾ ಶತಂ".
ಓಹ್ .. ಎಂಥಾ ಸುಂದರ ಮಾತುಗಳು. ವಧುವಿನ ಹೃದಯಕ್ಕೆ ಎಷ್ಟು ಸಂತೋಷ, ತೃಪ್ತಿ, ಆನಂದವನ್ನು ನೀಡಿದ ಈ ಮಾತುಗಳಿಗೆ, ನಮ್ಮ ಸಮಾಜ ಒಂದು ನಿರ್ಧಿಷ್ಟ ಕಾಲಾವಧಿಯನ್ನು ನೀಡಿ, ಒಂದು ವೇಳೆ ಆಕೆ ಏಕಾಂಗಿಯಾಗಿರುವ ಸಮಯ ದುರದೃಷ್ಟದಿಂದ ಒದಗಿದರೆ, ಆ ಮಂಗಲಸೂತ್ರವನ್ನೂ, ಆಕೆಯ ಸುಮಂಗಲೀ ತನವನ್ನು ನಿರ್ದಯರಾಗಿ ಕಿತ್ತುಕೊಳ್ಳುವುದೇ? ವರನ ಹೇಳಿಕೆಗೆ ಬೆಲೆ ಇಷ್ತೆಯೋ?! ಇದಕ್ಕೆ ನಾನು ಎನ್ನೆನಲಿ?! (ಇದು ನನ್ನ ಜೀವನದ ಉದ್ದಕ್ಕೂ ಕಾಡುತ್ತದೆ). ಪ್ರೀತಿ, ಕರುಣೆ, ಪ್ರೇಮ, ಪರಸ್ಪರ ವಿಶ್ವಾಸದ ಸಹಜೀವನ ಗೌರವವನ್ನು ಕೊಟ್ಟು-ತೆಕ್ಕೊಳ್ಳುವುದು ಇಂಥಾ ಗುಣವುಳ್ಳ ನಮ್ಮ ಆತ್ಮ ಮತ್ತು ಪರಮಾತ್ಮ ಒಬ್ಬನೇ ಅಲ್ಲವೇ?!
ನಾವು ಜ್ಞಾನವನ್ನು ಬೆಳಸಿಕೊಳ್ಳೋಣ, ಒಳ್ಳೆಯವರಾಗಿ ಬಾಳೋಣ, ಸಹಜೀವನದಲ್ಲಿ ಕಷ್ಟ ಸುಖಗಳನ್ನು ಹಂಚಿ ಕೊಳ್ಳೋಣ, ನಾವಿಬ್ಬರು ಒಂದೇ ನಿನ್ನನ್ನು ನಾನು ಎಂದೆಂದೂ ಕೈ ಬಿಡಲಾರೆ, ನೀನು ನನ್ನ ಹೃದಯ ದೇವತೆ, ನನ್ನ ಮನೆಯ ಭಾಗ್ಯಲಕ್ಷ್ಮಿ. ಇಂಥಾ ಹೃದಯ ಸ್ಪರ್ಶಿ ಮಾತುಗಳ ವಾಗ್ದಾನವನ್ನು ನೀಡಿ, ವರ ವಧುವಿನ ಕೈ ಹಿಡಿದುಕೊಂಡು ಸಪ್ತಪದಿಯನ್ನು ತುಳಿಯುವಲ್ಲಿ ನಮ್ಮ ಹವ್ಯಕ ವಿವಾಹದ ಮುಖ್ಯ ವಿಧಿಗಳು ಮುಗಿಯುತ್ತದೆ. ಹವ್ಯಕರ ವಿವಾಹ ಸಂಪ್ರದಾಯಕ್ಕೂ ಇತರೇ ಬ್ರಾಹ್ಮಣ ವರ್ಗಗಳ ವಿವಾಹ ಸಂಪ್ರದಾಯಕ್ಕೂ ಇರುವ ವ್ಯತ್ಯಾಸವೇನೆಂದರೆ:
(೧) ಹವ್ಯಕರ ವಿವಾಹದಲ್ಲಿ ಸಾಕ್ಷಿಗೆ ಬರುವುದು 'ಜಲ', ಅಗ್ನಿ ಅಲ್ಲ.
(೨) ಹವ್ಯಕರಲ್ಲಿ ಹೋಮ ನಡೆಯುವುದು ತಾಳಿ ಕಟ್ಟಿದ ನಂತರ.
(೩) ಹವ್ಯಕರಲ್ಲಿ ಮಂಗಳಸೂತ್ರಕ್ಕೆ ಬಳಸುವುದು ಒಂದು ತಾಳಿ, ಆದರೆ ಇತರೇ ಬ್ರಾಹ್ಮಣ ವರ್ಗಗಳಲ್ಲಿ ಬಳಸುವುದು ಎರಡು ತಾಳಿ.
ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಹವ್ಯಕರ ಮಕ್ಕಳ ವಿವಾಹದಲ್ಲಿ "ವರದಕ್ಷಿಣೆ" ಎನ್ನುವ ಪದಗಳೇ ಬಳಕೆಯಲ್ಲಿಲ್ಲ. ಇದನ್ನಂತೂ ಇಲ್ಲಿನ ಹವ್ಯಕ ಹೆಣ್ಣು ಮಕ್ಕಳು ಬಹಳ ಸಂತೋಷದಿಂದ ನೆನಪಿಸುತ್ತಾರೆ, ಗೌರವಿಸುತ್ತಾರೆ. ಇದರಿಂದಾಗಿ ಹೆಣ್ಣು ಮಕ್ಕಳಿಗೆ ತಮ್ಮ ತವರಿನ ಸಂಬಂಧಗಳು ಬಹಳ ಶಾಶ್ವತವಾಗಿ ಉಳಿಯುತ್ತದೆ.
Tuesday, October 25, 2011
ಹವ್ಯಕ ಮನೆತನದವರ- ಮನೆ ಹೆಸರು : ಮನೋರಮಾ ಎಮ್. ಭಟ್
Monday, October 24, 2011
ಹವ್ಯಕರ ಮದುವೆಯಲ್ಲಿ ಅಡುಗೆ: ಅಂದು ,ಇಂದು - ಸವಿತಾ ಎಸ್ ಭಟ್, ಅಡ್ವಾಯಿ
ಹವ್ಯಕರ ಮದುವೆ ಎಂಬುದು ಸರಳವಾದ, ಕಡಿಮೆ ಖರ್ಚಿನ ಮದುವೆಯಾಗಿತ್ತು ಎಂದರೆ ತಪ್ಪಲ್ಲ. ಮನೆಯಂಗಳದಲ್ಲಿ ಕಂಗಿನ ಕಂಬಗಳನ್ನು ಹಾಕಿ ತೆಂಗಿನ ಮರದ ಒಣ ಮಡಲನ್ನು ಹೆಣೆದು ಮಾಡಿದ ತಟ್ಟಿಗಳನ್ನು ಹೊದೆಸಿ ಚಪ್ಪರ ಮಾಡುತ್ತಿದ್ದರು. ಅಂಗಳವನ್ನು ಚೊಕ್ಕಟಮಾಡಿ ಸೆಗಣಿ ಸಾರಿಸುತ್ತಿದ್ದರು. ಲಭ್ಯವಿರುವ ಕಂಬ ಹಾಕಿ, ಜಮಖಾನ ಹೊದೆಸಿ ಮಧ್ಯಭಾಗಕ್ಕೊಂದು ತೆಂಗಿನ ಕಾಯಿ, ಎಲೆ ಅಡಿಕೆ ಕಟ್ಟಿದರೆ ಮಂಟಪ ತಯಾರಾಗುತ್ತಿತ್ತು. ವರದಕ್ಷಿಣೆ, ಚಿನ್ನ, ಬೆಳ್ಳಿ ಎಂಬ ಖಡ್ದಾಯದ ಹೊರೆಗಲಿಲ್ಲ. ಹೆತ್ತವರು ಯಥಾಶಕ್ತಿ ತಮ್ಮ ಮಗಳಿಗೆ, ಅಳಿಯನಿಗೆ ಉಡುಗೊರೆ ಕೊಟ್ಟರೆ ಅದೇ ತೃಪ್ತಿ ತರುತ್ತಿತ್ತು.
ಅಂದಿನ ಕಾಲದ ಮದುವೆಯ ಊಟವೆಂದರೂ ಹಾಗೆ. ಸರಳವಾದ, ಆಢಂಬರವಿಲ್ಲದ ಪಾಯಸದ ಸಿಹಿಯೂಟ. ಮದುವೆಯ ಹಿಂದಿನ ದಿನವೇ ನೆರೆಕರೆಯವರು, ಹತ್ತಿರ ಸಂಬಂಧಿಗಳು ಮದುವೆ ಮನೆಗೆ ಬಂದು ಸೇರುತ್ತಿದ್ದರು. ತಮ್ಮಲ್ಲಿ ಬಳಸುತ್ತಿದ್ದ ಬಾಳೆಕಾಯಿ, ಹಲಸು, ಚೀನೀಕಾಯಿ, ಸೌತೆಕಾಯಿ ಅಲ್ಲದೆ ಹಾಲು ಮಜ್ಜಿಗೆಗಳನ್ನು ತರುತ್ತಿದ್ದರು (ಬೂದುಗುಂಬಳ ಖಂಡಿತವಾಗಿಯೂ ತರುತ್ತಿರಲಿಲ್ಲ - ಅದು ಅಪರಕ್ರಿಯೆಗಳಿಗೆ ಸೀಮಿತವೆಂಬ ನಂಬಿಕೆ).
ಪುರೋಹಿತರು ರಾತ್ರಿ ಗಣಪತಿ ಪೂಜೆ ಮಾಡಿ ನಂತರ ಮೇಲಡಿಗೆಯವರು (ಅಡುಗೆಯ ಮುಖ್ಯಸ್ತರು) ಬಾಳೆಕಾಯಿ ಹೆಚ್ಚಿ ಕಂಚಿನ ಉರುಳಿಯಲ್ಲಿ ಹಾಕುತ್ತಿದ್ದರು. ಮಗುಚಿ ಬಿದ್ದ ಹೋಳುಗಳಿಗೆ ಅನುಸಾರವಾಗಿ ಮರುದಿನ ಮದುವೆ ಕಾರ್ಯಕ್ರಮಕ್ಕೆ ಎಷ್ಟುಜನ ಸೇರಬಹುದೆಂಬ ಅಂದಾಜು ಮಾಡುತ್ತಿದ್ದರು . ಅಂದು ರಾತ್ರಿ ಪಾಯಸದ ಊಟವಿರುತ್ತಿತ್ತು. ಹೆಚ್ಚಾಗಿ ಕಡಲೆಬೇಳೆ ಪಾಯಸವನ್ನೇ ಮಾಡುತ್ತಿದ್ದರು . ಊಟದ ನಂತರ ಗಂಡಸರು ಕಳಕಟ್ಟಿ ಕುಳಿತು ತರಕಾರಿ ಹೆಚ್ಚುವುದು, ಬಾಳೆಲೆ ಕಟ್ಟು ಕಟ್ಟಿಡುವುದು, ಇತ್ಯಾದಿ ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದರು. ಮಧ್ಯೆ ಮಧ್ಯೆ ಚಹಾ ಕಾಫಿಯ ಸರಬರಾಜು ಇರುತ್ತಿತ್ತು.
ಆ ಕಾಲದಲ್ಲಿ ಬೆಳಗ್ಗಿನ ಉಪಹಾರವೂ ಸರಳವಾಗಿರುತ್ತಿತ್ತು . ಅವಲಕ್ಕಿ, ಉಪ್ಪಿಟ್ಟು, ಚಹಾ, ಕಾಫಿ, ಕಷಾಯ, ಹಾಲು-ನೀರು ಇವಿಷ್ಟೇ. ಅನಂತರ ಬಾಳೆಹಣ್ಣು ಕೊಡುವುದು ಪ್ರಾರಂಭವಾಯಿತು. ದಿಬ್ಬಣಿಗರು (ಗಂಡಿನ ಕಡೆಯವರು) ಬಂದಾಗ ಕೈ ಕಾಲು ತೊಳೆಯಲು ನೀರು ಕೊಟ್ಟು ಅವರನ್ನು ಸಭೆ ಮಾಡಿ ಕುಳ್ಳರಿಸಿ ಬೆಲ್ಲ-ನೀರು, ಎಳನೀರು ಕೊಟ್ಟು "ಸರ್ವರೂ ಕ್ಷೇಮವಾಗಿ ಬಂದಿರೋ" ಎಂದು ವಿಚಾರಿಸಿಕೊಂಡು ಸ್ವಾಗತಿಸುತ್ತಿದ್ದರು. ಅನಂತರ ದಿಬ್ಬಣಿಗರಿಗೂ ಉಪಹಾರದ ವ್ಯವಸ್ತೆ ಹಿಂದಿನ ರೀತಿಯಲ್ಲೇ ನಡೆಯುತ್ತಿತ್ತು.
ಹಿಂದಿನ ಕಾಲದಲ್ಲಿ ಮಧ್ಯಾಹ್ನದ ಊಟಕ್ಕೆ ನಾಲ್ಕು ಬಗೆಯ ಪಲ್ಯ, ಕೋಸಂಬರಿ, ಮೆಣಸ್ಕಾಯಿ, ಅವೀಲು, ಚಿತ್ರಾನ್ನ, ಸಾರು, ಸಾಂಬಾರು, ಮಜ್ಜಿಗೆಹುಳಿ, ಒಂದು ವಿಧದ ಪಾಯಸ, ಮಜ್ಜಿಗೆ ನೀರು, ಉಪ್ಪಿನಕಾಯಿ, ಉಪ್ಪು, ಬೆಳ್ತಿಗೆ ಅಕ್ಕಿಯ ಅನ್ನ ಇರುತ್ತಿತ್ತು. ಐವತ್ತರ ದಶಕದ ಅಂದಾಜಿಗೆ ಕರಿದ ಹಪ್ಪಳ, ಬೆಲ್ಲದಿಂದ ಮಾಡಿದ ಸುಕ್ಕಿನುಂಡೆ ಎಂಬ ಸಿಹಿ ಕೆಲವು ಕಡೆ ಪ್ರಾರಂಭವಾಗಿತ್ತು. ಕ್ರಮೇಣ, ಸಿರಿವಂತರ ಮದುವೆಗಳಲ್ಲಿ ಹೋಳಿಗೆ, ಲಾಡು, ಸಜ್ಜಿಗೆ ಲಾಡು, ಪ್ರಾರಂಭವಾಗಿತ್ತು. ಅರವತ್ತರ ದಶಕದಲ್ಲಿ, ರಾತ್ರಿಯ ಮದುವೆಯೊಂದರಲ್ಲಿ ಜನರೇಟರ್ ಹಾಕಿಸಿ 6 ಮುಡಿ ಕಡಲೆಬೇಳೆಯ ಹೋಳಿಗೆ (ಸುಮಾರು ೧೫,೦೦೦ ಕ್ಕೂ ಮೀರಿ) ಮಾಡಿಸಿದ ದಾಖಲೆ ಇದೆ. ಅನಂತರದ ಕಾಲದಲ್ಲಿ ಎರಡೆರಡು ವಿಧದ ಪಾಯಸಗಳು ಪ್ರಾರಂಭವಾದವು. ಸಕ್ಕರೆ ಹಾಕಿ ಮಾಡುವ ಶಾವಿಗೆ ಪಾಯಸ, ಸಬಕ್ಕಿ ಪಾಯಸ, ಅಕ್ಕಿ ಪಾಯಸಗಳೂ ಪ್ರಾರಂಭವಾದವು. ಕ್ರಮೇಣ ಇಡ್ಲಿ-ಸಾಂಬಾರು, ಚಟ್ನಿ, ಜೊತೆಗೊಂದು ಸಿಹಿ, ಮಧ್ಯಾಹ್ನದ ಊಟಕ್ಕೆ ಸಿಹಿಯ ಜೊತೆಗೊಂದು ಕರಿದ ತಾಡಿ ಹೀಗೆ ಹೊಸ ಹೊಸ ಪದಾರ್ಥಗಳು ಸೇರ್ಪಡೆಯಾಗ ತೊಡಗಿದವು. ಬೋಂಡ ಬಜ್ಜಿಗಳೂ ಕಾಣಿಸತೊಡಗಿದವು. ಚಿತ್ರಾನ್ನ ಮರೆಯಾಗತೊಡಗಿತು. ಕೋಸಂಬರಿ ಕಾಣೆಯಾಯಿತು. ಪುಲಾವ್, ಘೀರೈಸ್, ಗೊಜ್ಜು, ಕುರ್ಮಗಳು ಪ್ರಾರಂಭವಾಗತೊಡಗಿತು. ಪಲ್ಯಗಳ ಸಂಖ್ಯೆ ಕ್ರಮೇಣ ಎರಡಕ್ಕೆ ಸೀಮಿತವಾಯಿತು. ಅಡುಗೆಯಲ್ಲಿನ ಐಟಂಗಳು ಹೆಚ್ಚಾದಾಗ ಅಡುಗೆಯವರಿಗೆ ಕೆಲಸದ ಹೊರೆ ಹೆಚ್ಹಾಗಿ ಅವರ ಗೊಣಗುವಿಕೆ ಪ್ರಾರಂಭವಾಗತೊಡಗಿತಂತೆ.
೭೦ರ ದಶಕದಲ್ಲಿ ಮನೆಯಲ್ಲಿ ಚಪ್ಪರಹಾಕಿ ಮದುವೆ ಮಾಡುವುದು ಕಷ್ಟಕರವೆನಿಸತೊಡಗಿದುದರಿಂದ ಮದುವೆ, ಉಪನಯನಗಳನ್ನು ದೇವಸ್ಥಾನಗಳಲ್ಲಿ, ಹಾಲ್ ಗಳಲ್ಲಿ ಮದುವೆ ನೆರವೇರಿಸುವುದು ಪ್ರಾರಂಭವಾಯಿತು. ಇದೀಗ ಮನೆಯಂಗಳದಲ್ಲಿ ಮದುವೆಯಾಗುವುದು ಅಪರೂಪವೇ ಅನ್ನಿಸಿದೆ. ಕೆಲವು ಕಡೆ ಮಾತ್ರ ವಧುಗೃಹಪ್ರವೇಶದ ಕಾರ್ಯಕ್ರಮ ಮನೆಯಂಗಳದ ಚಪ್ಪರದಲ್ಲಿ ನಡೆಯುತ್ತಿದೆಯಷ್ಟೇ.
೨೦೦೦ನೇ ಇಸವಿಯ ಅಂದಾಜಿಗೆ ಬೆಳಗ್ಗಿನ ಉಪಹಾರಕ್ಕೆ ಚಪಾತಿ, ಪೂರಿ, ಇಡ್ಲಿ, ವಡೆ, ಪತ್ರೊಡೆಗಳು ಶುರುವಾದವು. ಜೊತೆಗೆ ಸಿಹಿ ಕೂಡ ಇರುತ್ತಿದ್ದವು. ಊಟಕ್ಕೆ ಎರಡೆರಡು ಸಿಹಿಗಳು ಇರುತ್ತಿದ್ದವು. ಅನಂತರದ ದಿನಗಳಲ್ಲಿ ಖರ್ಜೂರ ಪಾಯಸ, ಒಣ ದ್ರಾಕ್ಷಿಯ ಪಾಯಸ, ಬಾಳೆಹಣ್ಣಿನ ಪಾಯಸ, ಮ್ಯಾಕ್ರೋನಿ ಪಾಯಸಗಳೆಲ್ಲ ಸೇರ್ಪಡೆಗೊಂಡವು. ಅಲ್ಲೊಮ್ಮೆ ಇಲ್ಲೊಮ್ಮೆ ಫ್ರೂಟ್ ಸಾಲಡ್ ಗಳನ್ನು ಪಾಯಸದ ಜೊತೆಗೆ ರಸಾಯನದ ರೀತಿಯಲ್ಲಿ ಪ್ರಾರಂಭವಾದದ್ದು ಇದೆ.ಹಾಲ್-ಗಳಲ್ಲಿ ಮದುವೆ ಪ್ರಾರಂಭವಾದಾಗ ಸ್ವಾಭಾವಿಕವಾಗಿಯೇ ನೆರೆ ಕರೆಯವರು, ನೆಂಟರು ಹಿಂದಿನ ರಾತ್ರಿಯೇ ಹೋಗಿ ತರಕಾರಿ ಹೆಚ್ಚುವುದು ಕಡಿಮೆಯಾಗ ತೊಡಗಿದೆಯಲ್ಲದೆ ಊಟದ ಪಂಕ್ತಿಯಲ್ಲಿ ಬಡಿಸುವ ಕೆಲಸಕ್ಕೂ ಜನರ ಅಭಾವ ಉಂಟಾಯಿತು. ಬಂದವರಿಗೆ ಮದುವೆ ಮುಗಿಸಿ ವಾಹನವೇರಿ ತಮ್ಮ ಮನೆಗೆ ಹೋಗುವ ತರತುರಿಯಿಂದಾಗಿ ಬಡಿಸಲು ಸಮಯವಿಲ್ಲದಾಗ ತೊಡಗಿತು. ಆಗ ಅನಿವಾರ್ಯವಾಗಿ ಸುಧಾರಿಕೆಯವರು ಸಂಬಳ ಪಡೆದು ಕೆಲಸ ಮಾಡುವ ಪರಿಸ್ತಿತಿ ಉಂಟಾಯಿತು. ಪಂಕ್ತಿಯಲ್ಲಿ ಬಡಿಸುವ ಹೊರೆ ಕಡಿಮೆಯಾಗಲು 'ಬುಫ್ಫೆ' ಪದ್ಧತಿ ಮತ್ತು ಟೇಬಲ್ ಊಟದ ಪದ್ಧತಿ ಪ್ರಾರಂಭವಾಯಿತು. ಜೊತೆಗೇ, ಊಟದ ನಂತರ 'ಐಸ್-ಕ್ರೀಂ' ಕೊಡುವ ಹೊಸ ಕ್ರಮವೂ ಪ್ರಾರಂಭವಾಯಿತು. ಈಗ ಮಳೆಗಾಲ, ಚಳಿಗಾಲವೆನ್ನದೆ ಐಸ್-ಕ್ರೀಂ ಕೊಡುವುದು ಹೆಚ್ಚಿನ ಕಡೆ ಕಾಣಿಸುತ್ತದೆ. ಅದನ್ನು ಪಡೆಯಲು ನೂಕು-ನುಗ್ಗಲು, ಕಿತ್ತಾಟ, ಕಾದಾಟಗಳು ಕಾಣಿಸುವಾಗ 'ಛೆ .. ಇಂತಹದ್ದೆಲ್ಲಾ ನಮಗೆ ಬೇಕಿತ್ತೆ' ಎನಿಸುವುದೂ ಇದೆ.
ಇತ್ತೀಚಿಗೆ ಪೇಟೆ ಪಟ್ಟಣಗಳಲ್ಲಿ 'ಕೇಟರಿಂಗ್' ಮೂಲಕ, ಗುತ್ತಿಗೆದಾರರಿಗೆ ಹಣತೆತ್ತಿ ಅಡುಗೆ ಜವಾಬ್ದಾರಿ ವಹಿಸಿ ತಮ್ಮ ಹೊರೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಪಾತ್ರೆ, ಪಗಡಿ, ಗ್ಯಾಸ್, ಒಲೆ, ತಕಾರಿ, ಹಾಲು, ಹಣ್ಣು, ಇತ್ಯಾದಿ ಗಳನ್ನೂ ತಂದು ತಮ್ಮ ಕೆಲಸ ನೆರವೇರಿಸಿಕೊಡುತ್ತಾರೆ. ಮುಹೂರ್ತಕ್ಕೆ ಕೆಲವೇ ಜನರಿದ್ದರೂ ಊಟದ ಹೊತ್ತಿಗೆ ಧಾರಾಳ ಜನ ಬಂದು ನಿಂತೋ ಕುಳಿತೋ ಹರಟುತ್ತಲೋs ಉಂಡು ಐಸ್-ಕ್ರೀಂ ತಿಂದು ಬಂದಷ್ಟೇ ಧಾವಂತದಿಂದ ಜನ ಹೋಗಿಬಿಡುತ್ತಾರೆ. ಒಟ್ಟಿನಲ್ಲಿ ಸರಳವಾಗಿ, ಬಂಧು, ಬಾಂಧವರ ಸಹಕಾರದಿಂದ ಮನೆಯಂಗಳದಲ್ಲಿ ಸರಳವಾಗಿ ಸಾಗುತ್ತಿದ್ದ ಮದುವೆಯ ಮಂಗಳಕಾರ್ಯ ಇಂದು ಆಡಂಬರದ, ಧಾವಂತದ, ದುಬಾರಿಯ, ಬಡವರಿಗೆ ಅನಿವಾರ್ಯ ಹೊರೆಯೆನಿಸುವ ಕಾರ್ಯಕ್ರಮವಾಗಿ ರೂಪಗೊಂಡಿರುವುದು ವಿಪರ್ಯಾಸದ ಸಂಗತಿ.
Tuesday, May 31, 2011
Summerhill by A. S. Neill: Child Rearing
Free Child - Self-regulated child. " Self regulation means the right of a baby to live freely, without outside authority in things psychic and somatic". To impose anything by authority is wrong. The child should not do anything until he comes to the opinion that it should be done.
"Freedom does not mean spoiling the child, and to give the same is very difficult. The very nature of society is inimical to freedom. Providing freedom (allow the child to live out his natural interest, live his own life) is important as it allows to grow in his natural way - good way".
The one commandment: " Thou shalt be on the child's side".
Motto: " For heaven's sake, let people live their own lives".
Be honest with your children without moralizing.
Fear: Unnatural and Unhealthy fear (fear of ghosts, mouse, spider etc. - termed as anxiety or phobia) is always bad for the child. "Never try to be boss, nor put yourself on pedestal. The child must never be made afraid, must never be made to feel guilty".
Fantasy: "The dream worth keeping is the one that can be carried out in reality. The other kind should be broken, if possible. To break a child's fantasy before the child has something to put in its place is wrong. The best way is to encourage the child to talk about the fantasy. In high probability, he will slowly loose interest in it. To find ego satisfaction is a vital necessity for every human being".
Destructiveness. A child always destroy things unconsciously. "A child should arrive at a sense of value out of his own free choice. It does not matter what you do to a child if your attitude toward that child is right" . [Do not give him bad conscience, or moral judgment of right or wrong. Instead insist on your individual right!].
If a child lies, either he is afraid of you or copying you.
A parent can answer any and every question of the child with truth: starting from where babies come from to telling mother’s age. Lying perishes in homes where fear flourishes. Abolish fear and the lying will decay.When kids lie, mainly due to fantasy, and not out of fear, best reaction would be to enter into the spirit of the game.
----------
Children must be allowed almost infinite responsibility. Duty (which has sinister associations, should be acquired, if at all, later in life) should not be confused with responsibility. It is a fallacy that responsibility should be reckoned by age. Same time, a should not be asked to face responsibilities for which he is not ready yet.
-------
There is nothing shocking to a child in feces and smells. It is the shocked attitude of the child that makes the child conscience-stricken.
Find out where a child’s interest is and help him to live it out. Suppression and silence always simply drive the interest underground.
When a parent says naughty or dirty or even thu thu, the element of right and wrong arises. The question becomes moral one – when it should remain a physical one. The right way is to allow him to live out his interest.
-----
To offer a prize for doing a deed is tantamount to declaring that the deed it not worth doing for its own sake. Giving rewards has a bad psychological effect on children because it arouses jealousies.
Both rewards and punishment attempts to compel interest – You can compel attention but you cannot compel interest. Interest is always egoistic. A reward should, for most part, be subjective: self-satisfaction in the work accomplished.
Punishment can never be dealt out with justice, for no man can be just [as he does not know himself]. Justice implies complete understanding. Judges are no more moral than garbage collectors, nor are they less free of prejudice.
An adult can never educate his children beyond his own complexes. If we try to understand ourselves, we find it difficult to punish the child. Punishment is always an act of hate.
Hitting a child gives him fear only when it is associated with a moral idea, with the idea of wrong. The point is: the kid should be made to learn a lesson, and not to be ‘insulted’.
Bad and unpardonable form of punishments: (1) that takes the form of a lecture. (2) praying for the erring soul of the child in his presence. (3) nagging.
Many parents honestly try to be jus, and they often convince themselves that they are punishing the child for his own good : “This hurts me more than it hurts you” is a pious self-deception.
Religion and morality make punishment a quasi-attractive institution. Punishment slaves the conscience. Punishment avows that it is wholly for the culprit’s good. It have nothing to do with hot temper: it is cold and judicial.
-------
As a parent you must have a sense of ‘Childish’ humor. But, it should never be cutting or critical, i.e. never treat a child with humor at the wrong time nor attack his dignity.
-----
It is the money value that is at the root of so much discipline in the home. [Don’t touch that!].
Too much money handicaps a child’s fantasy life. It is better to give a child too little than too much.
Small children do not value money. It is wrong to teach them to save.
-----
Manners [to care/feel for others] cannot be taught, for they belong to unconscious, and they are a matter of sincerity. Manners are an adult concept. Children, be they the children of professor or porter, have no interest in manners.
Etiquette, [thank you, excuse me, standing up, etc] on the other hand, can be taught, which are mostly meaningless. Most of them are nothing but expectations of ‘subservience from children’ by adults, not manners. These things will never actually sink into the child. Such kind of artificial manners makes child to behave insincerely.
Children must be free to question the rules of etiquette, but they should not question what might be called ‘social manners’ [Entering somebody’s room with dirty boots, etc], as it is impeding the privacy/freedom of others.
Children should never be asked to behave in a certain way, so that he/she will approve [should not make him behave insincerely].
Demanding respect for someone/something [School teacher, elder, etc] is an artificial lie. If a person really gives respect, he does so unawares.
-----
Children are naturally noisy, and parents must accept this fact and learn to live with it.
-----
Heartfelt expression of impatience is OK.. but shocked or moral tone is wrong.
Suppression of interest in bodily functions is wrong. Never call a child dirty.
----
One should never show a child how a toy works. [Indeed, one should never help a child in any way until or unless he is not capable of solving the problem himself].
Children should be allowed to pay with ‘safe’ kitchen things, when they are not in use.
------
Parents attach far too much importance to tidiness. Children should be allowed to live out his/her dirt complex. Cleanliness should not be forced upon, of course, health concern is justified.
Parents must decide what clothes small children should wear.
Young children have no innate interest in clothes, they acquire the complex, from parents who are neurotic on the subject of clothes, and fear doing so many things [playing, climbing trees etc].
------
Put child’s happiness before diet. [Argument: By repression you are causing more damage to child’s growth compared to the advantages that a ‘good’ food can bring in].
Time-table feeding should not be followed for the child. Baby must feed when he wants to feed.
A mother should be a step behind the baby [learning by intimate observation all the time, think the problem out for herself] rather than step ahead [knowing exactly what to do next following a timetable]. That is natural development of the child is more important than the ‘minimum trouble’ to adults.
In the pretext of guiding and molding, parents should not interfere with the kid’s natural impulses and behavior resulting in destruction of joy and spontaneity.
Balanced diet it important. Parent should not compel children to eat something which they hate.
Eating provides great deal of pleasure in childhood. It is too fundamental, too vital, to be marred by table manners.
-------
Monday, May 30, 2011
List of the Literary Works (Kannada) of D. V. Gundappa (ಡಿ. ವಿ. ಗುಂಡಪ್ಪ ರವರ ಕೃತಿಗಳು)
Dramas (ನಾಟಕಗಳು):
1. ಕನಕಾಲುಕ - Based on The Cup: A Tragedy by Lord Alfred Tennyson
2. ತಿಲೋತ್ತಮೆ
3. ಜಾಕ್ ಕೆಡ್ (Jack Cade) - Based on a character in Shakespeare's Henry VI.
4. ಮ್ಯಾಕ್ ಬೆತ್ (Macbeth)
5. ಪರಶುರಾಮ
6. ವಿದ್ಯಾರಣ್ಯ ವಿಜಯ
7. ಪ್ರಹಸನತ್ರಯೀ
Prose Writing (ನಿಬಂಧ)
1. ಜೀವನ ಸೌಂದರ್ಯ ಮತ್ತು ಸಾಹಿತ್ಯ
2. ಸಾಹಿತ್ಯ ಶಕ್ತಿ
3. ಋತ ಸತ್ಯ ಧರ್ಮ
4. ಬಾಳಿಗೊಂದು ನಂಬಿಕೆ
5. ಸಂಸ್ಕೃತಿ
6. ನಮ್ಮ ಸಾಹಿತ್ಯದ ಬೆಳವಣಿಗೆ
7. ಕಾವ್ಯಸ್ವಾರಸ್ಯ
8. ಕೆಲವು ಪಾರಿಭಾಷಿಕ ಪದಗಳು
9. ಕರ್ನಾಟಕದ ಪ್ರಗತಿ ಪಥ.
Biographies (ಜೀವನ ಚಿತ್ರ)
1. ದಿವಾನ್ ರಂಗಾಚಾರ್ಲು
2. ಗೋಪಾಲಕೃಷ್ಣ ಗೋಖಲೆ
3. ದಾದಾಬಾಯಿ ನವರೋಜಿ
4. ರಾಜಾರಾಮ್ ಮೋಹನ್ ರಾಯ್
5. ಜಾರ್ಜ್ ಚಕ್ರವರ್ತಿಗಳ ಕಿರೀಟಧಾರಣೆ
6. ವಿದ್ಯಾರಣ್ಯರ ಸಮಕಾಲೀನರು
7. ಜ್ಞಾಪಕ ಚಿತ್ರಶಾಲೆ 1: ಸಾಹಿತ್ಯ ಸಜ್ಜನ ಸಾರ್ವಜನಿಕರು
8. ಜ್ಞಾಪಕ ಚಿತ್ರಶಾಲೆ 2: ಕಲೋಪಾಸಕರು
9. ಜ್ಞಾಪಕ ಚಿತ್ರಶಾಲೆ 3: ಸಾಹಿತ್ಯೋಪಾಸಕರು
10. ಜ್ಞಾಪಕ ಚಿತ್ರಶಾಲೆ 4: ಮೈಸೂರಿನ ದಿವಾನರು
11. ಜ್ಞಾಪಕ ಚಿತ್ರಶಾಲೆ 5: ವೈಧಿಕ ಧರ್ಮ ಸಂಪ್ರದಾಯಸ್ಥರು
12. ಜ್ಞಾಪಕ ಚಿತ್ರಶಾಲೆ 6: ಹಲವರು ಸಾರ್ವಜನಿಕರು
13. ಜ್ಞಾಪಕ ಚಿತ್ರಶಾಲೆ 7: ಹೃದಯ ಸಂಪನ್ನರು
14. ಜ್ಞಾಪಕ ಚಿತ್ರಶಾಲೆ 8: ಸಂಕೀರ್ಣ ಸ್ಮ್ರುತಿ ಸಂಪುಟ
15. ಜ್ಞಾಪಕ ಚಿತ್ರಶಾಲೆ: ಹದಿನಾಲ್ಕು ವ್ಯಕ್ತಿ ಚಿತ್ರಗಳು
16. ಹಕ್ಕಿಯ ಪಯಣ (ಸಂ: ಹಾ. ಮಾ. ನಾಯಕ)
17. ವಿದ್ಯಾರಣ್ಯ ವೃತ್ತಾಂತ
Poetry (ಕವಿತೆ)
1. ವಸಂತ ಕುಸುಮಾಂಜಲಿ
2. ನಿವೇದನ
3. ಉಮರನ ಒಸಗೆ
4. ಮಂಕುತಿಮ್ಮನ ಕಗ್ಗ
5. ಮರಳುಮುನಿಯನ ಕಗ್ಗ
6. ಶ್ರೀ ರಾಮ ಪರೀಕ್ಷಣಂ
7. ಶ್ರೀ ಕೃಷ್ಣ ಪರೀಕ್ಷಣಂ
8. ಅಂತಃ ಪುರಗೀತೆ
9. ಗೀತ ಶಾಕುಂತಲಂ
10. ಕೇತಕೀ ವನ
11. ವಿದ್ಯಾರಣ್ಯ ಸ್ತುತಿ
12. ಕುಮಾರವ್ಯಾಸ ದರ್ಶನಂ
13. ಸ್ವತಂತ್ರ ಭಾರತ ಅಭಿನಂದನಸ್ತವ
14. ಮಹಾತ್ಮ ಗಾಂಧೀ ಜ್ಞಾಪಕ ಪದ್ಯ
15. ವಾಲ್ಮೀಕಿ ವ್ಯಾಸ ವಂದನಂ
16. ಕವಿತೆ
17. ಶೃಂಗಾರ ಮಂಗಳಂ
Children (ಮಕ್ಕಳ ಸಾಹಿತ್ಯ):
1. ಇಂದ್ರವಜ್ರ
2. ಬೆಕ್ಕೋಜಿ
3. ವಿಚಿತ್ರವಾದ ಚಾ ಪಾತ್ರೆ
4. ವಿಕ್ರಮ ಪೀಠ ೧, ೨
Politic (ರಾಜಕೀಯ)
1. ರಾಜ್ಯಾಂಗ ತತ್ವಗಳು
2. ರಾಜಕೀಯ ಪ್ರಸಂಗಗಳು
3. ರಾಜ್ಯ ಶಾಸ್ತ್ರ
4. ವೃತ್ತ ಪತ್ರಿಕೆ
5. ಮಹಾ ಚುನಾವಣಾ
6. ಇಂಡಿಯಾದ ಭಾಷಾ ಪ್ರಶ್ನೆ, ಇಂಗ್ಲಿಷಿನ ಸ್ಥಾನ
7. ಸ್ವರಾಜ್ಯವೆಂದರೇನು?
8. ಸಾರ್ವಜನಿಕರಲ್ಲಿ ಸಾತ್ತ್ವಿಕ
9. ರಾಜ್ಯ ಕುಟುಂಬ
10. ಮೈಸೂರಿನ ಕೈಗನ್ನಡಿ
Religious (ಧಾರ್ಮಿಕ)
1. ಈಶೋಪನಿಷತ್ತು
2. ಪುರುಷ ಸೂಕ್ತ
3. ಶ್ರೀ ಮದ್ಭಗವದ್ಗೀತಾತಾತ್ಪರ್ಯ
4. ದೇವರು
5. ವೇದ-ವೇದಾಂತ
6. ಶ್ರೀ ಮದಾಂಜನೇಯ ಸ್ವಾಮಿ
Tuesday, May 17, 2011
Shops selling Used, Old and Rare (non-text) Books.
SHOPS in Bangalore
| Shop Name | Address, email, phone, website | Remarks |
|---|---|---|
| Blossom Book House | #84/6, Opp to Amoeba, Church street, Bangalore-560001 Phone : +91.80.25320400,25559733, http://www.blossombookhouse.com/ | The Best! |
| The Bookworm | (1) No. 32, Basement, Brigade Road, Bangalore 560001 (2) No. 80/1 Shrungar Complex, M.G. Road, Bangalore 560001 Phone: 9845076757 email: kris.bookworm@gmail.com | So many Branches |
| The Select Book House | #71, Brigade Road Cross, Bangalore 560001 Tel: 25580770 | The Oldest |
| Lavanya Pustaka Loka | No 676, Pankaj Plaza, 20th Cross, 2nd Block, Rajajinagar, Bangalore 560010 Ph: 9242773166 | The Best for Kannada |
| Value Books Inc. | #320, 3rd Block, 59th Cross, Rajajinagar, Bangalore -560010 | Interesting sometimes |
| Sudha Book House | 654/13,B-1, Ramanashree Complex, Rajaji Nagar, Bangalore - 560010. Ph: 080 - 23509194, 23120920 | Ditto |
| Surya Book Stall | No 183,10th Cross,Sampige Road,Malleshwaram,Bangalore -560003 Phone: +91-9845199794 | Interesting |
| GooBe Book Republic | #11 Church Street Bangalore | Relatively Expensive |
SHOPS in Hyderabad
| Shop Name | Address, email, phone, website | Remarks |
|---|---|---|
| Best Book Centre | (1) 4-1-889/17 Fire Temple Complex, Tilak Road, Abids, Hyderabad - 1 (2) 6-1-70/1 1st Floor, Beside Hotel Ashoka, Lakdi-Ka-Pul, Hyderabad - 4 Ph: 24761428, 23235187 | Very Good |
SHOPS in Chennai
| Shop Name | Address, email, phone, website | Remarks |
|---|---|---|
| Rare Book House | #45/50, 2nd main Rd, Raja Annamalai Puram, Chennai, Tamil Nadu. Phone: +91 9941132756 | Very Good |
Monday, March 1, 2010
ಮಂಕುತಿಮ್ಮನ ಕಗ್ಗದ ನುಡಿ ಮುತ್ತುಗಳು - 55 Fundas from Kagga
2. ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ, ಒಂಟಿಸಿಕೊ ಜೀವನವ – ೭೩
3. ಲೋಕದಲಿ, ಜಾತಿಯಲಿ, ವ್ಯಕ್ತಿಯಲಿ, ಸಂಸ್ಥೆಯ ಸಾಕಲ್ಯದ (ಪರಿಪೂರ್ಣದ) ಅರಿವಿರಲಿ. - ೧೩೪
4. ನಿತ್ಯ ಪರಿವರ್ತನೆಯ ಚೈತನ್ಯ ನರ್ತನೆಯ ಸತ್ಯ ಜಗದಲಿ ಕಾಣೋ - ೧೩೯
5. ಸ್ಥೂಲ ವಿವಿಧದಿ ಬಾಳಿ, ಸೂಕ್ಷ್ಮ ಸಾಮ್ಯವ ತಾಳಿ, ಆಳುತಿರು ಜೀವನವ. - ೧೪೨
6. ಬರಲಿ ಬರುವುದು, ಸರಿವುದೆಲ್ಲ ಸರಿಯಲಿ, ನಿನಗೆ ಪರಿವೆಯೇನಿಲ್ಲೆಲವೋ - ೧೫೦.
7. ವಿಜ್ಞಾನ, ಶಾಸ್ತ್ರ, ಕಲೆ, ಕಾವ್ಯ ವಿದ್ಯೆಗಳೆಲ್ಲ ಧನ್ಯತೆಯ ಬೆದಕಾಟ. - ೨೨೭.
8. ವೆಸನಮಯ ಸಂಸಾರದಲಿ ವಿನೋದವ ಕಾಣ್ಬ ರಸಿಕತೆಯೆ ಯೋಗವೆಲೊ - ೨೪೧
9. ಊಳಿಗವೋ ಕಾಳಗವೊ ಕೂಳ್ಕರೆಯೋ ಗೋಳ್ಕರೆಯೋ ಬಾಳು ಬಾಳದೆ ಬಿಡದು - ೨೪೯.
10. ಪಾಟವವು (ಸಾಮರ್ಥ್ಯ) ಮೈಗಿರಲಿ, ನೋಟ ತತ್ವದೊಳಿರಲಿ, ಪಾಟಿಸು (ಸಾಧಿಸು) ಸಮನ್ವಯವ - ೨೬೧
11. ತಿದ್ದಿಕೊಳೋ ನಿನ್ನ ನೀಂ ; ಜಗವ ತಿದ್ದುವುದಿರಲಿ - ೨೯೨
12. ಪೂರ್ವಿಕರು, ಜತೆಯವರು, ಬಂಧು ಸಖ ಶತ್ರುಗಳು ; ಸರ್ವರಿಂ ನಿನ್ನ ಗುಣ -೩೩೮
13. ಸಹಿಸದಲ್ಲದೆ ಮುಗಿಯದಾವ ದಶೆ ಬಂದೊಡಂ , ಸಹನೆ ವಜ್ರದ ಕವಚ - ೩೬೬
14. ಅಂತಾನುಂಮಿಂತಾನುಂಎಂತೋ ನಿನಗಾದಂತೆ ಶಾಂತಿಯನೆ ನೀನರಸು ಮನ ಕೆರಳಿದಂದು . ಸ್ವಾನ್ತಮಂ ತಿದ್ದುತಿರು - ೩೭೯
15. ಮಕ್ಕಳ ಭವಿಷ್ಯಕ್ಕೆ ಕುಕ್ಕುಳಿತಗೊಳಬೇಡ (ಕಳವಳದ ಆಸೆ ಪಡಬೇಡ) , ದಿಕ್ಕವರಿಗವರವರೆ – ೪೨೦
16. ಆತ್ಮ ವಿಸ್ತಾರವಾಗಿಪುದೆ ನಿತ್ಯ ಸುಖ. ಒಟ್ಟು ಬಾಳ್ವುದ ಕಲಿಯೋ – ೪೩೨
17. ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ . ಬಿದ್ದ ಮನೆಯನು ಕಟ್ಟೋ – ೪೭೪
18. ಗೌರವಿಸು ಜೀವನವ ಗೌರವಿಸು ಚೇತನವ – ೪೭೫
19. ಅಂಗಡಿಯ ಮಾಡದಿರು ಸುಕೃತಪ್ರಸಕ್ತಿಯಲಿ. ಪೊಂಗುವಾತ್ಮವೇ ಲಾಭ - ೪೯೮
20. ಗಿಣಿಯೋದು ಪುಸ್ತಕಜ್ಞಾನ ; ನಿನ್ನನುಭವವೆ ನಿನಗೆ ಧರ್ಮದ ದೀಪ . – ೫೪೪
21. ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ , ಭಿನ್ನಿಸಲಿ , ನಿನ್ನ ಬಲವನ್ನು ಮೆರಸೋ – ೫೫೧
22. ಶಕ್ತಿಮೀರ್ದ ಪರೀಕ್ಷೆಗಳನು ವಿಧಿ ನಿಯಮಿಸಿರೆ , ಯುಕ್ತಿಮೀರ್ದ ಪ್ರಶ್ನೆಗಳನು ಕೇಳುತಿರೆ ; ಚಿತ್ತವನು ತಿರುಗಿಸೋಳಗಡೆ , ನೋಡು ನೋಡಲ್ಲಿ ! – ೫೫೬
23. ಹೋರಾಡು ಬೀಳ್ವನ್ನವೋಬ್ಬೊಂಟಿಯಾದೊಡಂ, ಹೋರಿ ಸತ್ವವ ಮೆರಸು – ೫೭೩
24. ನಿನ್ನ ಶಕ್ತಿಯನಳೆದು , ನಿನ್ನ ಗುಣಗಳ ಬಗೆದು , ಸನ್ನಿವೇಶದ ಸೂಕ್ಷ್ಮವರಿತು , ಧ್ರುತಿದಳೆದು , ನಿನ್ನ ಕರ್ತವ್ಯ ಪರಿಧಿಯ ಮೀರದೆ ಕೆಲಸ ಮಾಡು – ೫೭೬
25. ಎದೆಯನುಕ್ಕಾಗಿಸುತ , ಮತಿಗದೆಯ ಪಿಡಿದು ನೀನೆದುರು ನಿಲೆ ಬಿದಿಯೋಲಿವ – ೫೯೮
26. ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು. ದೊರೆತುದ ಹಸಾದವೆಂದುಣ್ಣು ಗೊಣಗಿಡದೆ . ಧರಿಸು ಲೋಕದ ಭಾರವ ಪರಮಾರ್ಥವನು ಬಿಡದೆ - ೬೦೧
27. ಕಾವಿರದೆ ಪಕ್ವವಹ ಜೀವವಿಳೆಯೋಳಗಿರದು. ನೋವೆಲ್ಲ ಪಾವಕವೋ – ೬೦೯
28. ಚಿತ್ತ ಸಂಸ್ಕಾರ ಸಾಧನವಯ್ಯ ಸಂಸಾರ - ೬೧೦
29. ಧರಿಸು ಜೀವನಧುರವ . ಚರಿಸು ಲೋಕದ ಮಾರ್ಗಗಳಲ್ಲಿ ಹಿತವರಿತು – ೬೨೧
30. ಪರಿಣಾಮದಲಿ ಧನಿಕ ಬಡವರೀರ್ವರುಮೊಂದೆ – ೬೩೧
31. ತುಂಬು ವಿರತಿಯ ಮನದಿ . ೬೩೮
32. ಮುಗ್ಧನಾಗದೆ ಭುಜಿಸು ಭುಜಿಸಲಿಹುದನು ಜಗದಿ - ೬೩೯
33. ತೊರೆದೆಲ್ಲ ಧಂಭಗಳ ನೀನೆ ನಿನ್ನಾಳಾಗು , ಪರದೇಶಿವೋಲು ಬಾಳು – ೬೪೦
34. ಗೋಳ್ಕರೆದರೇನು ಫಲ ಗುದ್ದಾಡಿದರೇನು ಫಲ , ಪಲ್ಕಿರಿದು ತಾಳಿಕೊಳೋ – ೬೪೩
35. ಗೆದ್ದುದೇನೆಂದು ಕೇಳದೆ , ನಿನ್ನ ಕೈಮೀರೆ ಸದ್ದು ಮಾಡದೆ ಮುಡುಗು -೬೬೨
36. ತನುವಿಗುಪಕ್ರುತಿಗೆಯ್ವ ಭರದಿ ನೀನಾತುಮದ ಅನುನಯವ ಕೆದಿಸದಿರು – ೬೬೭
37. ಈಗಲೋ ಆಗಲೋ ಎಂದೋ ಮುಗಿವುಂಟು ಎಂಬ ಭಾಗ್ಯವನು ನೆನೆದು ನಲಿ – ೬೬೯
38. ಮುಂದೆನಾಗುವುದೆಂಬ ಮಾತೇಕೆ ? ಹೊಂದಿಸುವನಾರೋ , ನಿನ್ನಾಳಲ್ಲ , ಬೇರಿಹನು . ಇಂದಿಗಿಂದಿನ ಬದುಕು – ೬೮೧
39. ನಿರ್ಮಿತ್ರನಿರಲು ಕಲಿ – ೬೮೯
40. ಎರಡು ಕೋಣೆಗಳ ಮಾಡು ನೀಂ ಮನದಾಲಯದಿ . ಹೊರಕೋಣೆಯಲಿ ಲೋಗರಾಟಗಳನಾಡು . ವಿರಮಿಸೋಬ್ಬನೆ ಮೌನದೊಳಮನೆಯ ಶಾಂತಿಯಲಿ - ೭೦೧
41. ಮಮತೆಯಳಿವಿಂ ಜ್ಞಾನ ; ಪಾಂದಿತ್ಯದಿಂದಲ್ಲ . – ೭೦೪
42. ಭರತನ ಹಾಗೆ ಸ್ವತ್ವದಾಷೆಯ ನೀಗಿ ಬಾಳು – ೭೧೦
43. ಅಳಲು, ದುಗುಡಗಳ ನಿನ್ನೊಳಗೆ ಬಚ್ಚಿಟ್ಟಿಕೋ. ನೀನಿಳೆಗೆ ಹರಡಬೇಡ – ೭೧೯
44. ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳಗೊಂದಾಗು - ೭೮೯
45. ಎನಾನುಮಂ ಮಾಡು ಕೈಗೆ ದೊರೆತುಜ್ಜುಗವ, ನಾನೇನು ಹುಲುಕಡ್ಡಿ ಎಂಬ ನುಡಿ ಬೇಡ - ೭೯೦
46. ತೊಟ್ಟು ನಿರಹಂಕೃತಿಯ ಕವಚವನು ನೀಂ ಪೋರು, ಮುಟ್ಟದಿಳೆಯಸಿ ನಿನ್ನ -೮೧೨
47. ತಾನಾಗಿ ಗಾಳಿವೊಲ್ ಬಂದ ಸುಖವೇ ಸುಖ. ನೀನೆ ಕೈ ಬೀಸಿಕೊಳೆ ನೋವು ಬೆವರುಗಳೇ ಫಲ = ೮೨೧
48. ಕೊಳದ ಜಲ ನಿನ್ನ ಮನ - ೮೨೯
49. ಆವುದೋ ಮನದ ಬಡಿದಾಟವನು ನಿಲಿಸಿ ನೆಮ್ಮದಿಯನೀವೊಡದೆ ಬಿಡುಗಡೆಯೊ ಜೀವಕ್ಕೆ - ೮೩೨
50. ಬೀಳಿಸದಿರೆಲೋ ನಿನ್ನ ನೆರಳನಿತರರ ಮೇಲೆ. ಬಾಳಿಕೊಳುವವರು ತಂತಮ್ಮ ಬೆಳಕಿನಲಿ - ೮೪೪
51. ಹೃದಯ ವೊಳಿತಾದೊಡೇ೦ ? ತಿಳಿವಿಹುದೆ? ಜಾಣಿಹುದೆ? - ೮೬೩
52. ತಾರತಮ್ಯ ವಿವೇಕವರಿಯದಾ ಸಂಸ್ಕಾರ, ಪ್ರೇರಕವೋ ಚೌರ್ಯಕ್ಕೆ - ೮೭೧
53. ದುಡುಕದಿರು ತಿದ್ದಿಕೆಗೆ - ೮೭೮
54. ಲಕ್ಷ್ಯ ತಪ್ಪದೆ ಚರಿಸು ಸಾಮಾನ್ಯ ಧರ್ಮಗಳ, ಮೋಕ್ಷ ಸ್ವತಸಿದ್ದ - ೯೦೩
55. ತ್ಯಜಿಸಿ ಭುಜಿಸಲ್ಕಲಿತವನೆ ಜಗಕೆ ಯಜಮಾನ - ೯೦೮
Monday, October 19, 2009
ಮನಸ್ಸು - ಡಿ ವಿ ಜಿ ಕಂಡಂತೆ.- On Manasu in Mankutimmana kagga.
ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ , ಆ ಮನಸಿನ ಏಳಿಗೆಗೆ ಕೊನೆಯೆಲ್ಲಿ?
ಮನದಿಂದ ಮನಕೆ ಹಾರುವುದು ಬಾಳಿನುರಿಯ ಕಿಡಿ. ಮನವೇ ಪರಮಾಧ್ಭುತವೋ.
ಏನ ಮಾಡಿದರೇನು, ಮನವ ತೊರೆದಿರಲಹುದೆ?
ಭೋಜನವ ನೀಡನೆನೆ ಮನ ಸುಮ್ಮನಿಹುದೇ?
ಮನವನಾಳ್ವುದು ಹಟದ ಮಗುವನಾಳುವ ನಯದೆ.
ಮನ ಕೆರಳಿದಂದು ಶಾಂತಿಯನೆ ನೀನರಸು (ಸ್ವಾಂತಮಂ ತಿದ್ದುತಿರು).
ಮನದ ಹದ ಹಾಲಿನ ತರಹ ಸೂಕ್ಷ್ಮ.
ಜನರು ಮನದ ಬಗೆ ಅರಿಯರು (ಸಂಪೂರ್ಣ ಜ್ಞಾನ ಇರುವಂತ ಕವಿ, ಶಿಲ್ಪಿ, ಕೃತಿಚತುರರೂ ಇಲ್ಲ).
ಸೃಷ್ಟಿ ಯಂತ್ರದ ಗುಟ್ಟು ಕೀಲುಗಳು - ಹೊಟ್ಟೆಯಲ್ಲಿ ಹಸಿವು, ಮನಸ್ಸಿನಲ್ಲಿ ಮಮತೆ.
ಮನಸ್ಸು ಬೆಳೆಯಲಿ ಭುಜಿಸಿ ನೂರು ನೂರನುಭವವ.
Saturday, August 8, 2009
200 Questions in Mankutimmana Kagga.
೨. ಏನು ಪ್ರಪಂಚಾರ್ಥ?
೩. ಏನು ಜೀವ ಪ್ರಪಂಚಗಳ ಸಂಬಂಧ?
೪. ಕಾಣದಿಲ್ಲಿರ್ಪುದೇನಾನುಮುಂಟೆ, ಅದೇನು?
೫. ಜ್ಞಾನ ಪ್ರಮಾಣವೇನು?
೬. ದೇವರೆಂಬುದು ಕಗ್ಗತ್ತಲೆಯ ಗವಿಯೇ?
೭. ದೇವರೆಂಬುದು ನಾವು ಅರಿಯದ ಎಲ್ಲದರ ಒಟ್ಟು ಹೆಸರೇ?
೮. ಜಗವ ಕಾಯಲು ಒಬ್ಬನಿರಲು, ಅದರ ಕಥೆಯೇಕಿಂತು?
೯. ಸಾವು ಹುಟ್ಟುಗಳೇನು?
೧೦. ಈ ಸೃಷ್ಟಿ ಒಂದು ಒಗಟೇ?
೧೧. ಬಾಳಿನರ್ಥವದೇನು?
೧೨. ಬಗೆದು ಬಿಡಿಸುವರಾರು ಸೋಜಿಗವನಿದನು ?
೧೩. ಜಗವ ನಿರ್ಮಿಸಿದ ಕೈ ಒಂದಾದರೆ, ಏಕಿಂತು ಬಗೆಬಗೆಯ ಜೀವಗತಿ?
೧೪. ಬದುಕಿಗಾರು ನಾಯಕರು: ಏಕನೋ, ಅನೇಕರೋ, ವಿಧಿಯೋ,ಪೌರುಷವೋ, ಧರ್ಮವೋ, ಅಂಧಬಲವೋ?
೧೫. ಈ ಅವ್ಯವಸ್ಥೆಯ ಪಾಡು ಸರಿಯಾಗುವುದು ಯಾವಾಗ, ಅಥವಾ ತಳಮಳವೇ ಗತಿಯೋ?
೧೬. ಕ್ರಮವೊಂದು ವುಂಟೆ ಈ ಸೃಷ್ಟಿಯಲಿ?
೧೭. ಭ್ರಮಿಪುದೇನು ಆಗಾಗ ಕರ್ತೃವಿನ ಮನಸ್ಸು?
೧೮. ಕರ್ತ್ರುವು ಮಮತೆವುಳ್ಳವನಾಗಿದ್ದರೆ, ಜೀವಗಳು ಹೀಗೆ ಶ್ರಮ ಪಡುವುದೇಕೆ?
೧೯. ಏನು ವಿಸ್ಮಯ ಸೃಷ್ಟಿ?
೨೦. ಮಾನವನ ಗುರಿಯೇನು, ಬೆಲೆಯೇನು, ಮುಗಿವೇನು?
೨೧. ಏನರ್ಥ ಹಾಗು ಎಂದು ಕಡೆ ಈ ಪ್ರಪಂಚಕೆಲ್ಲ?
೨೨. ಏಕೆ ಈ ಹಗೆ, ಕೊಲೆ, ದಗೆ, ಈ ಧರಣಿ ಸೌನಿಕನ (ಕಟುಕನ) ಕಟುವೇ?
೨೩. ಪುರುಷ ಸ್ವತಂತ್ರತೆಯ ಪರಮ ಸಿದ್ದಿ ಧರಣಿಗೆ ರಕ್ಥಾಭಿಷೇಕ ಮಾಡುವುದೆಯೇ?
೨೪. ಕರವಾಲವನು ಪುಷ್ಪಸರವೆಂದು ಸೆಳೆದಾಡೆ, ಪರಿಮಳ ಸೂಸುವುದೆ?
೨೫. ಒಂದೇ ಗಗನ, ನೆಲ, ಧಾನ್ಯ, ನೀರು, ಗಾಳಿ, ಆದರೂ ಏಕೆ ಈ ವೈಷಮ್ಯ?
೨೬. ಕಂಡ ದೈವಕ್ಕೆಲ್ಲ ಕೈಮುಗಿವುದೇಕೆ?
೨೭. ನಾನಾ ವಸ್ತುಗಳಿಗೆ ನಾನಾ ಜನರು, ನಾನಾ ಮೌಲ್ಯ ಕಟ್ಟುವ ಈ ಅಂಗಡಿಯ ಗತಿಯೆಂತೋ?
೨೮. ಈ ಜಗದಲ್ಲಿ ಸತ್ಯತೆ ಎಲ್ಲಿಹುದು?
೨೯. ಒಂದು ವಸ್ತುವಿಗೆ ಮೊದಲು ಹಾಗು ಕೊನೆ ತೋರದಿದ್ದರೆ ನಾವು ಏನೆಂದು ಭಾವಿಸಬೇಕು?
೩೦. ಧರೆಯ ಬದುಕೇನು, ಗುರಿಯೇನು, ಫಲವೇನು?
೩೧. ಮೃಗಖಗಕಿಂತ ನರನು ಸಾಧಿಪುದೇನು?
೩೨. ನಮ್ಮ ಕಣ್ಣು ಮನಸ್ಸುಗಳೇ ನಮಗೆ ಸುಳ್ಳು ಹೇಳುವದಾದರೆ, ನಂಬುವುದಾದರೂ ಏನನ್ನು? *
೩೩. ಬ್ರಹ್ಮವೇ ಸತ್ಯವಾದರೆ, ಸೃಷ್ಟಿಯೇ ಮಿಥ್ಯವಾದರೆ, ಈ ಎರಡರ ನಡುವೆ ಸಂಬಂಧವಿಲ್ಲವೇ?
೩೪. ಸತ್ಯ, ಮಿಥ್ಯೆಯ ಹಿಂದೆ ಬಚ್ಚಿಟ್ಟುಕೊಂಡಿಹುದೆ?
೩೫. ಬ್ರಹ್ಮ ಈ ಜಗವ ರಚಿಸಿದ್ದು ಬರಿಯಾಟವೋ, ಕನಸೋ, ಅಥವಾ ನಿದ್ದೆ ಕಲರವವೋ?
೩೬. ಅವನು ಮರುಳನಲ್ಲದಿದ್ದರೆ, ಜಗದ ನಿಯಮವೇನೂ, ಗುರಿ, ಗೊತ್ತು, ಏನು?
೩೭. ನರನ ಪರೀಕ್ಷೆ ಮಾಡುವುದು ಬ್ರಹ್ಮನಿಗೆ ಆಸೆಯೇ ?
೩೮. ನಮ್ಮ ಬಾಳು ಬರೀ ಸಮಸ್ಯೆಯೇ?
೩೯. ಈ ಬಾಳಿಗೆ ಪೂರ್ಣವದೆಲ್ಲಿ?
೪೦. ಪ್ರಶ್ನೆಗಳಿಗೆ ಉತ್ತರ ಕೊಡ ಬಾರದವನ ಗುರುವೆಂದು ಕರೆಯುವೆಯ? *
೪೧. ಮೋಹ ಭ್ರಾಂತಿಗಳನ್ನು ಕವಿಸಿ, ಯೋಗ್ಯವಲ್ಲದ ಮಾರ್ಗದಲ್ಲಿ ನೂಕಿ, ಆ ಪರೀಕ್ಷೆಯಲ್ಲಿ ಗೆಲ್ಲಲಿಲ್ಲವೆಂದು ವಿಧಿ ಹೇಳುವುದು ಸರಿಯೇ?
೪೨. ಬ್ರಹ್ಮನು ವಿಶ್ವದಲ್ಲಿ ಅವತರಿಸಿದ್ದಲ್ಲಿ, ಅವನ ವೇಷಗಳೇಕೆ ಮಾರ್ಪಡುತ್ತದೆ?
೪೩. ಏಕೆ ಬ್ರಹ್ಮ ಅವಿತುಕೊಂಡಿಹನು ಕುರುಹ ತೋರದೆ? ಊಸರವಳ್ಳಿಯೇನು ?
೪೪. ಕತ್ತೆಲೆಯಲ್ಲಿ ಒಂದು ಸಣ್ಣ ಬೆಳಕಿನಹಾಗೆ ಏಕೆ ಬ್ರಹ್ಮ ನಮಗೆ ಅವನ ನಿಜರೂಪದ ಬಗ್ಗೆ ಒಂದು ಗುರುತನ್ನು ನೀಡುವುದಿಲ್ಲ?
೪೫. ಸತ್ಯಕ್ಕೆ ಮನೆಯೆಲ್ಲಿ? ಬರೀ ಶ್ರುತಿ ತರ್ಕದೊಳೊ, ಅನುಭವವೂ ಅದರ ನೆಲೆ ಯಾಗುವುದಿಲ್ಲವೇ? 50
೪೬. ಸೊಗಸಿನ ಮೂಲವೆಲ್ಲಿ? ಯೋಚಿಸುವ ನಮ್ಮ ಮನಸ್ಸಿನೊಳೊ?
೪೭. ಹುಲ್ಲಿಗೆ ಹಸಿರು ಎಲ್ಲಿಂದ ಬರುತ್ತದೆ?, ಒಂದು ಗುಣಕ್ಕೆ ಕಾರಣವೊಂದೆ?
೪೮. ಕುರುಡ ಸೂರ್ಯ ಚಂದ್ರರನು ಕಣ್ಣಿಂದ ಕಾಣುವನೇನು?
೪೯. ಮಣಿ ಮಂತ್ರ ತಂತ್ರಗಳ ಸಾಕ್ಷ್ಯಗಳೇಕೆ ಮನಗಾಣಿಸಲು ನಿನಗೆ ದೈವದಧ್ಬುತವ?
೫೦. ವ್ಯಕ್ತ ಚೇತನವ ಅಳಿವರು ವಿಜ್ಞಾನಿಗಳು, ಅವ್ಯಕ್ತ ಚೇತನವ ಅರಿತವರಾರು?
೫೧. ನರಭಾಷೆ ಬಣ್ಣಿಪುದೆ ಪರಸತ್ತ್ವ ರೂಪವನ್ನು?
೫೨. ಸೃಷ್ಟಿಯಲ್ಲಿ ಬಹುಭಾಗ ವ್ಯರ್ಥವೆನಿಸುವುದಿಲ್ಲವೇ ?
೫೩. ಮರೆತಿಹನೆ ಬೊಮ್ಮ?!!
೫೪. ಆವುದು ಇರುವಿಕೆಗೆ ಆದಿ?, ಎಂದು ಸೃಷ್ಟಿಗೆ ಮೊದಲು?
೫೫. ಮೂಲಮಂ ಕಂಡಂಗೆ ಸಂಭ್ರಾಂತಿ ಏನು?, ಹಿಮಗಿರಿಯ ಕಂಡಂಗೆ ಕ್ರಿಮಿಯ ಹಿರಿಮೆ ಅದೇನು? *
೫೬. ಜೀವಿತ, ಬ್ರಹ್ಮಾಂಡ, ಧರ್ಮ, ಕರ್ಮ, ಏನು ಇವೆಲ್ಲ? 100
೫೭. ಮೇಯವನು ಬಗೆದೇನಮೇಯ ಸುತ್ತಲುಂ ಇರಲು?
೫೮. ಜಡವೆಂಬುದೇನು? ಜೀವವೇಮ್?
೫೯. ವಿಶ್ವಸತ್ತ್ವ ನಾನೆನುವ ಚೇತನದಿ ರೂಪಗೊಂಡಿಹುದೋ? or viceversa?
೬೦. ಸೂರ್ಯ, ಚಂದ್ರ, ಭೂಮಿ - ಹಳೆಯವಿವು, ನೀನಿದರೊಳಾವುದನು ಕಳೆದೀಯೋ, ಹಳದು ಹೊಸತಲ್ಲಿ ಇರುವುದಿಲ್ಲವೇ?
೬೧. ಮಾಯೆಯ ಮಹತ್ವವೇನು?
೬೨. ಪ್ರಕೃತಿಯಿಂ ಹೊರಗಿರುವ ನರನಾರು ಸೃಷ್ಟಿಯಲಿ?
೬೩. ಗುರಿಯಿಡದ, ಮೊದಲು ಕೊನೆಯಿರದ, ದರಬಾರಿನಲ್ಲಿ ಸರಿಯೇನು ತಪ್ಪೇನು?
೬೪. ಮೂರು ರಾಜರಿರುವ (ನರ, ಕರ್ಮ ದೈವ) ಇಲ್ಲಿ, ಸರಿ ಇರೋದೇ ಆಶ್ಚರ್ಯ, ಇನ್ನು ಹೆಚ್ಚು ಕಮ್ಮಿ ಇದ್ದಾರೆ ಆಶ್ಚರ್ಯವೇನು? - 150
೬೫. ತಂದೆ ಯಾರ್, ಮಕ್ಕಳಾರ್, ನಾನೆಂಬುದೆದ್ದುನಿಲೆ ? *
೬೬. ಉತ್ಸಾಹವಿದ್ದೇನು, ವಾತ್ಸಲ್ಯವಿದ್ದೇನು, ಅಕ್ಷಿ ನಿರ್ಮಲವೇನು? * (Macbeth).
೬೭. ಕರೆದು ತಳ್ಳುವ, ತಳ್ಕರಿಸುತ (ತಬ್ಬಿಕೊಳ್ಳುತ್ತ) ಕಿಚ್ಚಿಡುವ, ತರಳತೆ (ಚಪಲ ಸ್ವಭಾವ) ಏನು ತಂತ್ರ? *
೬೮. ಮಧುರಭಾವ, ಪ್ರೇಮ, ದಯೆ, ಎಲ್ಲ ವಿಧಿಯ ಅಂಗಡಿಯಲ್ಲಿ ಕಸವೆಂದು ತಳ್ಳಿದರೆ, ಬದುಕಿನಲಿ ತಿರುಳೇನು?
೬೯. ಪ್ರಕೃತಿಗೆ ವಶನಾಗದಿಹ ನರನಾರು?
೭೦. ಅಮೃತಕಣವಂ ಮನುಷ್ಯನೆಂಬ ಮಡಿಕೆಯಲ್ಲಿ ಬಚ್ಚಿಟ್ಟು, ವಿಮರ್ಶೆ ಮಾಡುವ ಬುದ್ಧಿಗೆ ಮೋಹದ ಕನ್ನಡಕ ಹಾಕುವುದು, ಸೌಂದರ್ಯವೋ, ವಿನಯವೋ?
೭೧. ಅಂತರಂಗವನೆಲ್ಲ ಬಿಚ್ಚಿ ತೋರಿಪನಾರು?, ಅಂತರಗಭೀರಗಳ ತಾನೇ ಕಂಡವನಾರು?
೭೨. ಇದಮಿತ್ಥ (ಇದು ಹೀಗೆ ಸರಿ) ಎಲ್ಲಿಹುದು ಮನುಜ ಸ್ವಭಾವದಲ್ಲಿ? 200
೭೩. ಉರಿಯುತಿರೆ ಹೊಟ್ಟೆ ಕಿಚ್ಚಾರಿಸಲು ನೀರೆಲ್ಲಿ?
೭೪. ಎದೆಯಲ್ಲಿ ನರಕವ ನಿಲಿಸೆ ನಿದ್ದೆಗೆ ಎಡೆ ಎಲ್ಲಿ?
೭೫. ಆರಿಸಲಾಗುವುದೇ ನರರು ಮತ್ಸರದ ಸಂಕಟವ?
೭೬. ಮನಸ್ಸು ಬೆಳೆದಂತೆಲ್ಲ ಹಸಿವು ಬೆಳೆವುದು, ಮನಸ್ಸಿನ ಏಳಿಗೆಗೆ ಕೊನೆಯೆಲ್ಲಿ?
೭೭. ಸೌಂದರ್ಯ ಬಾಂಧವ್ಯಗಳು ಸತ್ಯವಲ್ಲದೊಡೆ, ಕುಂದುವಡೆಯದ ಸತ್ಯವ ಇಳೆಯೊಳು ಇನ್ನೆಲ್ಲಿ?
೭೮. ಹಾಳು ಹಾಳೆಲ್ಲ ಬಾಳು ಎನುತಿದ್ದರೆ, ಅದರ ಊಳಿಗವ ತಪ್ಪಿಸುವ ಜಾಣನೆಲ್ಲಿಹನು? 250
೭೯. ಪರದ ಮೆಲ್ಕಣ್ಣಿಟ್ಟು, ಈ ಧರೆ ತುಚ್ಛವೆನ್ನುತ್ತ ತೊರೆದು ಆಯಾಸಗೊಂಡರೆ ಫಲವೇನು?*
೮೦. ಹೊರಲೇ ಬೇಕಾದಂತ ಹೊರೆಗಳನ್ನ ಜರಿಯುವುದಾದರೂ ಏಕೆ?
೮೧. ಎಷ್ಟೂ ಜನ ಕಷ್ಟವೇ ಪಡದೆ ದಡವನ್ನು ಸೇರುವುದಿಲ್ಲವೇ?
೮೨. ಬಾಳು ಪಾಳೆನ್ನುವರ ಬಿಟ್ಟಿಹುದೇ ಬೆದಕಾಟ.
೮೩. ಬಾಳ ಹಳಿಯುವುದೇಕೆ?, ಗೋಳ ಕರೆಯುವುದೇಕೆ?, ಲೀಲೆಯೇಂ ಬಾಳು?
೮೪. ಮಾರೀಚ ಹರಿಣ ಅಡ್ಡಾಡಲು, ಧೃಡಮನಸ್ಕಳಾದ ಸೀತೆಯ ಮನಸ್ಸು ಚಂಚಲವಾದುದ್ದೇಕೆ?
೮೫. ಆನೆಗಾರ್, ಇರುವೆಗಾರ್, ಕಾಗೆಗಾರ್, ಕಪ್ಪೆಗಾರ್ ಕಾಣಿಸುವವರನ್ನವನು? (ಹಸಿವೆ ಅದರ ಗುರುವು)*
೮೬. ಯಮನಿಗೇಕೆ ಅಪಕೀರ್ತಿ? ನರರು ಬಲು ಕರುಣಿಗಳೇ?
೮೭. ತಿಳಿಯದೆ ಹಳಿಯುವುದೇಕೆ? (ಗಾವಿಲನ (ಮೂಢನ) ಗಳಹೇನು (ಅರ್ಥವಿಲ್ಲದ ಮಾತು))?
೮೮. ನರರ ಸ್ವಭಾವ ವಕ್ರಗಳನ್ನು ಎಣಿಸುವುದೇಕೆ?
೮೯. ತಕ್ಕುದಲ್ಲದ ಅಪೇಕ್ಷೆಗೇಕೆ ಮದ್ಯವ ಕುದಿಸುತುಕ್ಕಿಸುವನದನು ವಿಧಿ?
೯೦. ಹಟವಾದಕೆಡೆಯೆಲ್ಲಿ ಮನುಜ ಪ್ರಪಂಚದಲಿ?
೯೧. ಪಟುವಾಗಿ ನಿಲಲಹುದೆ ಮನಲೊಳೆಸಗಿದ ಗೋಡೆ? (ಕಟುತೆ ಸಲ್ಲದು ಜಗಕೆ). 300
೯೨. ಮೆಲ್ಲದೆಯೇ ಧಾವಿಸುತ ದಣಿವ ಕರುವನು ಪೋಲ್ತೊಡೆ ಎಲ್ಲಿಯೋ ಸುಖ ನಿನಗೆ?
೯೩. ಅಪ್ಪಲೆ ತಿಪ್ಪಲೇ ತಿರುಗಿ ಬಿದ್ದವ, ಸ್ವಪ್ನ ಲೋಕದಿ ತಿರೆಯ ಮರೆತವ, ತಪ್ಪು ಸರಿಗಳ ತೂಕ ಅಳಿತುಕುಳಿತವ - ಬೆಪ್ಪನಾರು ಮೂವರಲಿ?
೯೪. ಮುಂದಕೇತಕೆ ಮಿಗಿಸುವೆ ಕರ್ಮಋಣಶೇಷಗಳ, ಬಂಧಿಸಿಹನೆ ವಿಧಿ ನಿನ್ನ?
೯೫. ಕೊಂಚ ಕೊಂಚಗಳರಿವು ಪೂರ್ಣದರಿವಾದೀತೇ?
೯೬. ಸತ್ಯವೆಂಬುದೆಲ್ಲಿ?, ಸತ್ಯಾನುಭವ ಎಲ್ಲರಿಂಗೂ ಒಂದೇ ಹೇಗಾಗುವುದು?
೯೭. ನಿನ್ನ ಜೀವಿತವೆಲ್ಲ ನಿನ್ನ ಕೈಮಾಳ್ಕೆ ಏನು? ಪರರ ಪ್ರಭಾವ ಇರುವುದಿಲ್ಲವೇ?
೯೮. ರಚಿಸಿದವನಿಂತೊಡಲೊಳಿಡೆ ವಿಷಮ ಕುಟಿಲಗಳ, ಉಚಿಟವಾವುದೋ ನಿನಗೆ? * 350.
೯೯. ಹುದುಗಿಹುದು ಅದೆಲ್ಲಿ ಪರಮಾತ್ಮ ಈ ತನುವಿನಲ್ಲಿ?
೧೦೦. ಲೋಕವೆಲ್ಲವೂ ದೈವಲೀಲೆ ಎಂದರೆ, ಶೋಕ ಸೊಂಕದೆಹೋದರೆ ಆ ಲೀಲೆ ನೀರಸವೇಂ? *
೧೦೧. ಇದು ನಡೆಯಲಿಲ್ಲ ಅದು ನಿಂತುಹೋಯಿತು ಎನ್ನುತ್ತಾ ಎದೆಯುಬ್ಬೆಗವನೊಂದಿ (ಉಧ್ವೇಗ) ಕುದಿಯುವುದ್ಯಾಕೆ?, ಅಧಿಕಾರ ಪಟ್ಟವನು ನಿನಗಾರು ಕಟ್ಟಿಹರು?
೧೦೨. ಹೊಟ್ಟೆ ನೋವಿಳಿಯುತಿರೆ ರಟ್ಟೆ ನೋವೆನ್ನುವುದು, ಮಟ್ಟಸವೆ (flat) ತಿರೆಹರವು ?
೧೦೩. ............ ಕಾತರತೆ, ತಲ್ಲಣವು ನಿನಗೇಕೆ?
೧೦೪. ಅದು ಒಳಿತು ಇದು ಕೆಟ್ಟದೆಂಬ ಹಠ ನಿನಗೇಕೆ?
೧೦೫. ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ ? *
೧೦೬. ಬೇಕೆನಿಪುದೊಂದೆನಗೆ , ವಿಧಿ ಗೆಯ್ವುದಿನ್ನೊಂದು , ಈ ಕುಟಿಲಕೇಂ ಮದ್ದು?
೧೦೭. ವನದಿ ನಿರ್ಜನದಿ ಮೌನದಿ ತಪಸ್ಸನ್ನು ಮಾಡುವವನ ನೆನಪಿನಲ್ಲಿ ಹಿಂದಿನ ಅನುಭವ ಉಳಿಯದೇನು? *
೧೦೮. ಈ ಜಗದ ಗಂಧ ಪರಿಪರಿ ಹಸಿವ ಕೆಣಕುತಿರೆ, ಭೋಜನವ ನೀಡೆನೆನೆ ಮನ ಸುಮ್ಮನಿಹುದೇ?
೧೦೯. ಉದರ ದೈವಕೆ ಜಗದೊಳೆದುರು ದೈವವದೆಲ್ಲಿ?
೧೧೦. ಸುಪ್ತವಹುದೆಂತಿಚ್ಛೆ ? (ಗುಪ್ತದಲಿ ಕೊಳಿಯುತ್ತೆ ವಿಷಬೀಜವಾಗಿ).
೧೧೧. ದೇಹ, ಆತ್ಮ : ದಾಹಗೊಂಡಿರಲೊಂದು ಮಿಕ್ಕೊಂದಕೆಲ್ಲಿ ಸುಖ?
೧೧೨. ಸೌಂದರ್ಯ ಬಾಂಧವ್ಯಗಳು ಹೊಂದಿಸದೆ ಕುಂದಿಸದೆ ಜೀವಗಳನ್ನು, ಅದನ್ನು ಬರಿದು ಎನ್ನಲು ಹೇಗೆ ಸಾಧ್ಯ? 400
೧೧೩. ಅಳೆವರಾರ್ ಪೆಣ್-ಗಂಡುಗಳನೆಳೆವ ನೂಲುಗಳ?
೧೧೪. ಹೆಬ್ಬದುಕನೊಂಟಿತನದೊಳದೇನು ಬದುಕುವೆಯೋ? (ತಬ್ಬಿಕೊಳೋ ವಿಶ್ವವನು).
೧೧೫. ಶಿಲೆಯೆ ನೀ ಕರಗದಿರಲು? (ಅಳುವು, ನಗುವು ಹೃದಯದ ಬಾಗಿಲನ್ನು ತೆರೆಯುವುದು).
೧೧೬. ಕದಡದಿರ್ದೊಡೆ ಮನವ, ತನು ಸೊಗವ ಸವಿದೊಡೇ೦ ?
೧೧೭. ಸೊಗಸು ಬೇಡದ ನರಪ್ರಾಣಿ ಎಲ್ಲಿಹುದಯ್ಯ?
೧೧೮. ಸುಂದರತೆ ಎನುವುದೇನು? (nice descriptions on Beauty).450
೧೧೯. ಶುದ್ದಿಸದೆ ನಭ ಧರೆಯ ಮರಮರಳಿ ಮಳೆಯಿಂ? (ಬಿದ್ದ ಮನೆಯನು ಕಟ್ಟೊ).
೧೨೦. ಸತ್ಯವೆಂಬುದೇನು ಸೈನಿಕನ ಜೀವನದಿ? (ಸಾರ್ಥಕತೆಯಿಂ ಸತ್ಯ)
೧೨೧. ಜೀವಿ ಬೇಡದಿರೆ ದೈವವನು ಕೇಳುವರಾರು?, ದೈವ ಗುಟ್ಟಿರಿಸದಿರೆ ಜೀವಿ ಅರಸುವುದಾದರೂ ಏನು?
೧೨೨. ವಿಹಿತಗೈದವರಾರು ವಸತಿಯಂ ದೈವಕ್ಕೆ? (ಬಹುಜನ ಕೈಮುಗಿವ ತೀರ್ಥಸ್ಥಳದೊಳು ಮಹಿಮೆಯ ಬಗ್ಗೆ ಸಂಶಯಿಸಬೇಡ).
೧೨೩. ಪುಣ್ಯಕಾರ್ಯಕ್ಕೆ ಪ್ರತಿಫಲವು ಬೇರೇಕೆ? (ಸುಕೃತಕದು ತಾನೇ ಫಲ ಹಿತ ಮನದ ಪಾಕಕದು, ಪೊಂಗುವಾತ್ಮವೇ ಲಾಭ).
೧೨೪. ಹೂವು ಒಡವೆಗಳು ದೈವಕ್ಕೇಕೆ? (ಯಾವುದು ತನಗೆ ಒಳಿತೋ, ನರನು ಅದನ್ನು ಪರಮಂಗೆ ನೈವೇದಿಪುದು ಸಹಜ). 500
೧೨೫. ಸೃಷ್ಟಿಯ ಅಧ್ಬುತ ಶಕ್ತಿ ಉಳ್ಳ ಒಬ್ಬನಿರಲು, ನಮ್ಮಿಷ್ಟಗಳನು ಅರಿತು ನಮಗೆ ನೀಡುವುದು ಅವನಿಗೆ ಅರಿಯದೇನು?
೧೨೬. ಅರಿಕೆಯೆಲ್ಲವ ನಡೆಸದಿರೆ ದೊರೆಯೇ ಸುಳ್ಳಹನೆ?
೧೨೭.ನಿನ್ನೇಳು ಬೀಳುಗಳು ನಿನ್ನ ಸೊಗ ಗೋಳುಗಳು, ನಿನ್ನೊಬ್ಬನೋಸುಗವೇ ನಡೆವ ಯೋಜನೆಯೇಂ?
೧೨೮. ಎನಗೆ ಸುಖವಿಲ್ಲ ಅದರಿಂ ದೇವರಿರನೆನ್ನುವನುಮಿತಿಯ ನೀಂ ಗೆಯ್ಯೆ, ಸುಖಿ ಅದೇನೆನುವಂ?
೧೨೯. ಎಣಿಪುರಾರು ಅನುಭವವನ್ನು, ಆವ ಪ್ರಮಾಣದಲಿ? (ಮಣಲ ಗೋಪುರವೋ ಅದು )
೧೩೦. ಹಳದೆಂದು ನೀನ್ ಕಳೆಯದಿರು, ತಳಹದಿಯಲ್ಲವೇ ಅದು ನಮ್ಮೆಲ್ಲ ಹೊಸ ತಿಳಿಮಿಂಗೆ?
೧೩೧. ಕಟ್ಟಡದ ಪರಿಯನು ಇಟ್ಟಿಗೆ ಎಂದು ಕಂಡೀತು? (ಸೃಷ್ಟಿ ಕೋಟೆಯಲಿ ನೀನೊಂದು ಇಟ್ಟಿಗೆ)
೧೩೨. ಚರಣ ನಡೆವನಿತು, ಕಣ್ಣರಿವನಿತು ದೂರ ನೀಂ ಚರಿಸದಿರೆ ಲೋಪವಲ? 550
೧೩೩. ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ ನನ್ನಾಹ ಸಾಗೀತೆ? ದೈವ ಒಪ್ಪೀತೆ?
೧೩೪. ತಿಳಿವಿಗೊಳಿತೆನಿಸಿದುದು ನಡೆಯೊಳೇತಕ್ಕಿರದು? *
೧೩೫. ನಿರ್ಮಮದ ಸದ್ವಿವೇಕದ ದೀಪಕ್ಕಿಂತ ನೀನು ಆಶ್ರಯಿಸಲು ಇನ್ನೇನಿಹುದು?
೧೩೬. ನೋಡುವರ ಕಣ್ಣೊಲವ ಬೇಡುವಳೇ ಸೃಷ್ಟಿ? *
೧೩೭. ಜನುಮಜನುಮಗಳಿಂದಲೂ ಪೇಚಾಟ ತಿುಣುಕಾಟ, ಮುನಿವುದಾರಲಿ ಹೇಳು?
೧೩೮. ಮರಕ್ಕೆ ಸುಮ-ಫಲ ಮುಹೂರ್ತ ನಿಶ್ಚಿತವೇನು? (ಮತಿ, ಮನಂಗಳ ಕೃಷಿತಪ:ಫಲವೂ ಅಂತೆಯೇ).
೧೩೯. ದೂರದಲಿ ಕೊರಗುತ್ತ ಬಾಳ್ವ ಬಾಳ್ಗೇನು ಬೆಲೆ? (ಹೋರಿ ಸತ್ತ್ವವ ಮೆರಸು)
೧೪೦. ದೇವರದಿದೆಲ್ಲ, ದೇವರಿಗೆಲ್ಲ ಎಂದು ಕೂಗುತ, ಆವುದನೂ ಅವನ ನಿರ್ಣಯಕ್ಕೆ ಬಿಡದೇ, ದಾವಂತಪಡುತ ತನ್ನ ಇಚ್ಛೆಯನೇ ಘೋಷಿಸುವ ಭಾವವೆಂತ: ಭಕುತಿ?
೧೪೧. ಕೊರೆಯಾದೊಡೇನೊಂದು ನೆರೆದೊಡೇನಿನ್ನೊಂದು ? (ಒರಟು ಕೆಲಸವೋ ಬದುಕು).
೧೪೨. ಫಲವೇನು ಹೆಣಗಾಡಿ ಹೋರಾಡಿ ಧರೆಯೊಳಗೆ? (ಗಲಿಬಿಲಿ ಈ ಬಾಳು ಎನಬೇಡ). See the next two.
೧೪೩. ಜಟ್ಟಿ ಕಾಳಗದಿ ಗೆಲ್ಲದೊಡೆ, ಗರಡಿಯ ಸಾಮು ಪಟ್ಟು ವರಸೆಗಳೆಲ್ಲ ವಿಫಲವೆನ್ನುವೆಯೇ೦.? (ಗಟ್ಟಿತನ ಗರಡಿ ಫಲ).
೧೪೪. ವರ ಸಧ್ಯಕಿಲ್ಲದೊಡೆ ಬರಿದಾಗುವುದೇ ಪೂಜೆ?
೧೪೫ . ಬಿಡುವಿಲ್ಲದೆಯೇ ಜೀವಿಯು ಅಂಗಡಿಯ ಸರಕುಗಳನ್ನು (ಜೀವನದ ಲಾಭ ನಷ್ಟ) ಎಣಿಸೆ , ಕಡೆಯೆಂದು?
೧೪೬. ಬದುಕೊಂದು ಕದನವೆಂದು ಅಂಜಿ ಬಿಟ್ಟೋಡುವನು, ಬೀದಿಯ ಬಾಯಿಗೆ ಕವಳವಾಗದೇ ಉಳಿಯುವನೆ? 600
೧೪೭. ಉದರಶಿಖಿ ಒಂದುಕಡೆ ಹೃದಯಶಿಖಿ ಇನ್ನೊಂದುಕಡೆ ಕುದಿಸದಿದ್ದರೆ, ಜೀವಶಿಲೆ ಮೃದುವಾಗುವುದೆಂದು?
೧೪೮. ಅತಿಶಯದ ಪ್ರೇಮವಿರದ ದಾಂಪತ್ಯ ವರ್ಧಿಸದು, ವ್ಯಾಮೋಹಕ್ಕೆ ಎಡೆಮಾಡಿಕೊಟ್ಟರೆ ನಿಗಳವಹುದು (ಸಂಕೋಲೆ). ಸಾಮರಸ್ಯವನ್ನು ಎಂದು ಕಾಣುವುದು ಈ ವಿಷಮದಲಿ (ಆಮಿಷದ ತಂಟೆಯದು).
೧೪೯. ಜಯಿಸಿ ಮದನನ ಬಳಿಕ ತನ್ನೊಡಲೊಳು ಉಮೆಯ ಅನ್ವಯಿಸಿಕೊಂಡಿಹುದೇನು?
೧೫೦. ಪ್ರತ್ಯೇಕ ಸುಖವ, ನೀಂ ಪ್ರತ್ಯೇಕ ಸಂಪದವ ಅತ್ಯಾಷೆಯಿಂದರಿಸಿ ಮಿಕ್ಕೆಲ ಜಗವನು ಒತ್ತಟ್ಟಿಗಿಡುವೆನೆನೆ ನಷ್ಟವಾರಿಗೋ ಮರುಳೆ? (ಬತ್ತುವುದು ನಿನ್ನಾತ್ಮ)
೧೫೧. ನೋವಿಲ್ಲದವರು ನೊಂದವರನು ಸಂತೈಸುತಿರೆ ಜೀವನವು ಕಡಿದಹುದೆ?
೧೫೨. ಪರಿಣಾಮದಲಿ ಧನಿಕ ಬಡವ ಇಬ್ಬರು ಒಂದೆ, ಕರುಬು ಕೊರಗೇತಕೆಲೋ?
೧೫೩. ಕಂಬನಿಯನಿಡುವ ಜನ ದೇವರ ನಂಬಲೊಲ್ಲದರೇ೦?, ಹಂಬಲನೆ ತೊರೆದಂಗೆ ನಂಬಿಕೆಯ ಹಂಗೇಕೆ? (ತುಂಬು ವಿರತಿಯ ಮನದಿ)
೧೫೪. ಕೊರತೆಯೊಂದನು ನೀನು ನೆನೆನೆನೆದು ಕೆರಳಿ ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ ನರಳುವುದು ಬದುಕೇನೋ?
೧೫೫. ಹೆಗಲಹೊರೆ ಹುಟ್ಟಿದರ್ಗೆಲ್ಲಮಿರುತಿರೆ, ನಿನ್ನ ರಗಳೆಗಾರಿಗೆ ಬಿಡುವೋ? 650
೧೫೬. ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ, ದಕ್ಕುವುದೇ ನಿನಗೆ ಜಸ?
೧೬೦. ಬಿರುದಗಳಿಸಲಿಕೆಸಪ, ಹೆಸರ ಪಸರಿಸಲೆಸಪ ದುರಿತಗಳಿಗೆ ಎಣೆ ಉಂಟೆ?
೧೬೧. ಉದ್ಧರಿಸುವೆನು ಜಗವನು ಎನ್ನುತಿಹ ಸಖನೆ ನಿನ್ನುದ್ಧಾರ ಎಷ್ಟಾಯ್ತೋ?
೧೬೨. ಬರುವೆಲ್ಲ ಬೇನೆಗಂ ಮದ್ದನಾರಿರಿಸಿಹರು? ನರರ ಕೀಳ್ತನಕೆಲ್ಲ ಪರಿಹಾರವೆಂತು?
೧೬೩. ಹುಟ್ಟಿದವರೆಲ್ಲ ಸಾಯದೆ ನಿಲ್ಲೇ ಹೊಸತಾಗಿ ಹುಟ್ಟುವವರಿಗೆ ಎಡೆ ಎಲ್ಲಿ?
೧೬೪. ನೀನು ಎಷ್ಟು ಉಂಡರೇನು? (ಪುಷ್ಟಿ ಮೈಗಾಗುವುದು ಹೊಟ್ಟೆ ಜೀರ್ಣಿಸುವಷ್ಟೇ)
೧೬೫. ಶಿಶುಗಳ ಅವಲಕ್ಕಿ ಬೆಲ್ಲದ ಸಂಭ್ರಮವ ನೋಡಿ ಹಸಿವನು ಹೊಂದುವನೆ ಹಿರಿಯನು? (ವಿಷಯಪೂರಿತ ಲೋಕವನ್ನು ಅನಾಸಕ್ತಿಯಿಂದ ನೋಡುವವನೆ ಜಾಣ)
೧೬೬. ಪುಸ್ತಕದ ಚಿತ್ರದಿಂದ ಊಹಿಸುವೆಯ ಹಿಮಗಿರಿಯ ವಿಸ್ತಾರದ ಅದ್ಭುತವ? (ಪೂರ್ಣ ವಸ್ತು ಗ್ರಹಣವು ಅಪರೋಕ್ಷದಿಂದಹುದು)
೧೬೭. ತತ್ವ ಒಂದರ ಹಿಡಿತಕ್ಕೆ ಒಗ್ಗದಿಹ ಬಾಳೇನು? (ಕಿತ್ತ ಗಾಳಿಯ ಪಟವೋ)
೧೬೮. ಇಂದ್ರಿಯಾತೀತವನು ಹಿಡಿಯಲು ಇಂದ್ರಿಯಗಳಿಗೆ ಸಾಧ್ಯವೇ?
೧೬೯. ಶರನಿಧಿಯನು ಈಜುವವನು ಸಮರದಲಿ ಕಾದುವವನು ಗುರಿಯೊಂದನು ಬಿಟ್ಟು ಬೇರೆಯೊಂದನು ನೋಡುವನೆ?
೧೭೦. ಎಡವದೆಯೇ ಮೈ ಗಾಯವಡೆಯದೆಯೆ ಮಗುವಾರು ನಡೆಯ ಕಲಿತವನು? (ಮತಿ ನೀತಿ ಗತಿಯುಂ ಅಂತು)700
೧೭೧. ದೊರೆತನದ ಜಟಿಲಗಳ ಕುಟಿಲಗಳ ಕಠಿಣಗಳ ಭರತನು ಉಳಿಸಿದನೆ ರಾಮನ ತೀರ್ಪಿಗೆಂದು?
೧೭೨. ಮೃತನ ಸಂಸಾರ ಕಥೆ ಶವ ವಾಹಕರಿಗೇಕೆ? (ಧೃತಿಯ ತಳೆ ನೀನಂತು)
೧೭೩. ತನ್ನ ಶಿಳುಬೆಯನು ತಾನೇ ಹೊತ್ತನಲ ಗುರು ಯೇಸು? (ನಿನ್ನ ಕರ್ಮದ ಹೊರೆಯ ಬಿಡದೇ ನೀನೆ ಹೊರು)
೧೭೪. ಅಳಲು ದುಗುಡಗಳ ನಿನ್ನೊಳಗೆ ಬಯ್ತಿಡದೆ ನೀನಿಳೆಗೆ ಹರಡುವುದೇಕೋ?
೧೭೫. ಆವ ಕಡೆ ಹಾರುವುದೋ ಆವ ಕಡೆ ತಿರುಗುವುದೋ ಸಿಕ್ಕಿದ್ದುದನು ಉಣ್ಣುವುದು ಬಾನೊಳು ಆಡುವ ಹಕ್ಕಿಗೆ ನಿತ್ಯಾನುಭವ ನೀನಿದನು ಮೀರಿಹೆಯ?
೧೭೬. ಭವಿಕ ನಿನಗೆಷ್ಟಿಹುದೋ ಮರೆತು ಪರರ ಯಶ, ಧನ ಕಂಡು ಕೊರಗುವುದು ಶಿವನಿಗೆ ಕ್ರಿತಜ್ಞತೆಯೇ? 750
೧೭೭. ಮತಿಗರ್ಥವಾದೊಡೇ೦? (ಸ್ಮೃತಿಯೊಳು ನೆಲಸಿರಲಿ, ಸತತ ಸಂಧಾನದಲಿ ಪರಮಾರ್ಥವಿರಲಿ)
೧೭೮. ತಾಮಸಿಗೆ ವರವೆಲ್ಲಿ? (ಮಹಿಮೆ ಕಾಂಬೊಡೆ ನಿನಗೆ ಸಂಸ್ಕಾರವಿರಬೇಕು)
೧೭೯. ಕಾಳನ್ನು ಉದಯದಿ ಬಿತ್ತೆ ಸಂಜೆಗದು ಪೈರಹುದೇ? (ತಾಳ್ಮೆಯೇ ಪರಿಪಾಕ)
೧೮೦. ನಿರಾಷೆಯಲಿ ನಿಂತಿರುವವನಿಗೆ ದೇವತೆಗಳಿ೦ದೇನು? ವೈರಾಗ್ಯಪಥಿಕಂಗೆ ನಷ್ಟ ಭಯವೇನು? ಪಾರಂಗತನ ಅಂತರಾಳ ದೂರಗಳೇನು? (ಇಷ್ಟ ಬಂದ ದಾರಿ ಅವನದು)
೧೮೧. ಪೂರ್ಣತೆಗೆ ಸೊಟ್ಟೇನು? (ಉನ್ನತದ ಶಿಖರದಿಂ ತಿಟ್ಟೇನು ಕುಳಿಯೇನು) 800
೧೮೨. ಶುಭವಾವುದು ಅಶುಭವಾವುದು ಲೋಕದಲಿ ನೋಡೆ?. (ವಿಭಜಿಸಲಿಕ್ಕೆ ಆಗದ ಅನ್ಯೋನ್ಯ ಸಂಬಂಧ).
೧೮೩. ಮಣಿಕನಕ ಸಂಕೋಲೆ ತನುವ ಬಂಧಿಸದೇಂ? (ಮನ ಸರ್ವಸಮವಿರಲಿ)
೧೮೪.ಸಾತ್ವಿಕದಿ ಬಾಳ್ದವನ್ಗೆ ಎತ್ತಲೇ೦ ಭಯವಿಹುದು?
೧೮೫. ಮೇಲು ಬೀಳುಗಳು ಆರಿಗೆ ಅದು ಎಂತೋ ನೀನೇನರಿವೆ? (ತಾಳದಿರು ಗುರುತನವ, ಬೀಳಿಸದಿರೆಲೋ ನಿನ್ನ ನೆರಳ ಇತರರ ಮೇಲೆ) see next three..
೧೮೬. ಪೆರತೊಂದು ಬಾಳ ನೀನಾಳ್ವ ಸಾಹಸವೇಕೆ? (ಹೊರೆ ಸಾಲದೇ ನಿನಗೆ)
೧೮೭. ಮರದಿ ಮೊಗ್ಗು ನೈಜದಿಂದ ಅರಳಿದರೇನೆ ಸೊಗಸು ಎಲ್ಲರಿಗೆ, ಸೆರೆಮನೆಯ ಕ್ಷೇಮವೇಂ?
೧೮೮. ಒಳಿತರೊಳೆ ನೀಂ ಬಾಳು; ಪರವದೆಂತಿರ್ದೋಡೇ೦ ? 850
೧೮೯. ಸರ್ವ ಹಿತವೊಂಡುಂತೆ? (ಸುಲಭವಲ್ಲ ನರ ಲೋಕ ಹಿತ ನಿರ್ಧಾರ)
೧೯೦. ವಿಲವಿಲನೆ ಚಪಲಿಸುವ ಮನುಜ ಸ್ವಭಾವದಲಿ ನೆಲೆ-ಗೊತ್ತು ಹಿತಕೆಲ್ಲಿ?
೧೯೧. ಹೃದಯವೊಳಿತಾದೊಡೇ೦?, ತಿಳಿವಿಹುದೆ? ಜಾಣಿಹುದೇ?
೧೯೨. ಪರಿಪೋಶಿಸದೆ ನಿನ್ನೊಡಲ ದಾರಿಮರದ ಫಲ? ಕಿರಿಜಾಜಿ ಸೊಗಕುಡದೆ?
೧೯೩. ಲವಲೇಶಮಾನುಮಿರದಿರೆ ಕಹಿ ಜೀವನದಿ ನಿದ್ರಿಸುವನೆ ನರನು?
೧೯೪. ಬಳಲಿ ನೆಲದಲಿ ಮಲಗಿ ಮೈಮರೆತು ನಿದ್ರಿಪನ ಕುಲುಕಿ ಹಾಸಿಗೆಯನರಸೆನುವುದು ಅಪಕೃತಿಯೇ (Misdeed)? (ಒಳಿತನೆಸಗುವೆನೆಂದು ನಿಮ್ಮದಿಯ ನುಂಗದಿರು, ಸುಲಭವಲ್ಲ ಒಳಿತೆಸಗೆ).
೧೯೫. ಒಡೆಯದಿರು ತಳಹದಿಯ ಸರಿಪಡಿಪೆನದನೆಂದು ಸಡಿಲಿಸುವ ನೀಂ ಮರಳಿ ಕಟ್ಟಲರಿತವನೇಂ? (ದುಡುಕದಿರು ತಿದ್ದಿಕೆಗೆ)
೧೯೬. ಸ್ವಪ್ನ ಲೋಕವ ಜಾಗೃತಂ ಸುಳ್ಳೆನುದನಲ್ತೆ? (ಸುಪ್ತಂಗೆ ಜಾಗೃತನ ಲೋಕ ಸುಳ್ಳೆ)
೧೯೭. ಜಗದಿ ಜಗತ್ವವನು ಮಾಯಾ ವಿಚಿತ್ರವನು ಒಗೆದಾಚೆ ಬಿಸುಡೆಲ್ಲ ಇಂದ್ರಿಯ ಗೋಚರ ಪ್ರಪಂಚವನು ಮಿಗುವುದೇಂ? (ಆಕಾರ ಮತ್ತು ನಾಮ ಇಲ್ಲದ ವಸ್ತು) 900
೧೯೮. ತನ್ನ ಹೊಟ್ಟೆಯ ಚಿಂತೆಯೇ೦ ಮೊದಲು ಮನೆತಾಯ್ಗೆ? (ತ್ಯಜಿಸಿ ಭುಜಿಸಲ್ ಕಲಿತವನೆ ಜಗಕೆ ಯಜಮಾನ)
೧೯೯. ಬ್ರಹ್ಮ ಹೃದಯದಿ ನಿಲ್ಲೆ ಮಾಯೆಯೇ೦ಗೈದೊಡೇ೦?
೨೦೦. ನಿನಗಾರು ಗುರುವಹರು? ಗುರು ಶಿಷ್ಯ ಪಟ್ಟಗಳು ನಿನಗೇಕೆ? (ನಿನಗೆ ನೀನೆ ಗುರುವೋ) 945






